‘ಖ್ಯಾತ ವಕೀಲರಾಗಿದ್ದ ಅಂಬೇಡ್ಕರ್ ಅವರು ವಕೀಲರ ಸಂಘ, ನಗರಪಾಲಿಕೆಯ ಸಮಾರಂಭ, ಸ್ನೇಹಿತರ ಭೇಟಿ ಮೊದಲಾದ ಕಾರ್ಯಕ್ರಮಗಳಿಗೆಂದು 1939ರಲ್ಲಿ ಇಲ್ಲಿಗೆ ಮುಂಬೈನಿಂದ ರೈಲಿನಲ್ಲಿ ಬಂದಿದ್ದರು. ಆಗ ನಗರದಲ್ಲಿ ಹೋಟೆಲ್ಗಳ ಸೌಲಭ್ಯಗಳು ಅಷ್ಟಾಗಿ ಇರಲಿಲ್ಲ. ಆದ್ದರಿಂದ ಆಯೋಜಕರು ಹಾಗೂ ಸಮಾಜದ ಮುಖಂಡರು ಕಂಗ್ರಾಳಿ ಗಲ್ಲಿಯ ಪರಿಶಿಷ್ಟರ ಕೇರಿಯಲ್ಲಿ ಆ ಕಾಲಕ್ಕೆ ದೊಡ್ಡದಾಗಿದ್ದ ಸಿದ್ದವ್ವ ಅವರ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ಆಗ, ಸಿದ್ದವ್ವ ಆತಿಥ್ಯ ನೀಡಿದ್ದಲ್ಲದೇ ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಈ ವಿಷಯವನ್ನು ಹಲವು ಬಾರಿ ತಿಳಿಸಿದ್ದರು’ ಎಂದು ಮುಖಂಡ ದುರ್ಗೇಶ್ ಮೇತ್ರಿ ಪತ್ರಕರ್ತರಿಗೆ ತಿಳಿಸಿದರು.