<p><strong>ಬೆಳಗಾವಿ: </strong>ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ‘# ನಮ್ಮ ಸಿ.ಎಂ ಸತೀಶ ಜಾರಕಿಹೊಳಿ...’ ಅಭಿಯಾನವನ್ನು ಆರಂಭಿಸಿದ್ದಾರೆ. ಕರ್ನಾಟಕ ಸತೀಶ ಜಾರಕಿಹೊಳಿ ಯುವಸೇನೆ ಸಂಘಟನೆಯು ತನ್ನ ಫೇಸ್ಬುಕ್ನಲ್ಲಿ ಇಂತಹದೊಂದು ಪೋಸ್ಟ್ ಹಾಕಿದೆ.</p>.<p>‘ಸಿದ್ದರಾಮಯ್ಯ ನಮ್ಮ ಸಿ.ಎಂ ಅಲ್ಲ. ಸತೀಶ ನಮ್ಮ ಸಿ.ಎಂ’, ‘ನಮ್ಮ ಸಿ.ಎಂ ಸತೀಶ ಜಾರಕಿಹೊಳಿ ಮಾತ್ರ... ಇಂದು, ಮುಂದು, ಎಂದೆಂದೂ...’ ಎನ್ನುವ ಬರಹಗಳನ್ನು ಹಾಕಲಾಗಿದೆ. ಈ ಪೋಸ್ಟ್ಗೆ 244 ಜನರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.</p>.<p><strong>ಕಾಲಕೂಡಿ ಬರಬೇಕು:</strong></p>.<p>ಅಭಿಯಾನದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಸತೀಶ ಜಾರಕಿಹೊಳಿ, ‘ರಾಜ್ಯದ ಮುಖ್ಯಮಂತ್ರಿ ಆಗುವ ಆಸೆ ನನಗೂ ಇದೆ. ಅದಕ್ಕೆ ಕಾಲ ಕೂಡಿಬರಬೇಕು. ಪಕ್ಷದ ಹೈಕಮಾಂಡ್, ಶಾಸಕರು, ಮುಖಂಡರು ಈ ಬಗ್ಗೆ ನಿರ್ಧರಿಸುತ್ತಾರೆ. ನೋಡೋಣ’ ಎಂದು ಹೇಳಿದರು.</p>.<p><strong>ಲಕ್ಷ್ಮಿ ಹೆಬ್ಬಾಳಕರ ಸಹೋದರನ ಪರ ಪ್ರಚಾರ:</strong></p>.<p>ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರನ್ನು ಕಣಕ್ಕಿಳಿಸಬೇಕೆಂದು ಫೇಸ್ಬುಕ್ನಲ್ಲಿ ಕೆಲವರು ಪ್ರಚಾರ ಕೈಗೊಂಡಿದ್ದಾರೆ.</p>.<p>ಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದೇ ಸಮುದಾಯಕ್ಕೆ ಸೇರಿದ ಚನ್ನರಾಜ ಹಟ್ಟಿಹೊಳಿ ಅವರಿಗೆ ಟಿಕೆಟ್ ನೀಡಬೇಕೆಂದು ‘ಲಕ್ಷ್ಮಿ ಹೆಬ್ಬಾಳಕರ ಅಭಿಮಾನಿಗಳ ಬಳಗ’ವು ತನ್ನ ಫೇಸ್ಬುಕ್ನಲ್ಲಿ ಅಭಿಯಾನ ಆರಂಭಿಸಿದೆ.</p>.<p>ಹಾಲಿ ಈ ಕ್ಷೇತ್ರದ ಸಂಸದರಾಗಿರುವ ಬಿಜೆಪಿಯ ಸುರೇಶ ಅಂಗಡಿ ಅವರು ಕೂಡ ಲಿಂಗಾಯತರಾಗಿದ್ದು, ಇವರನ್ನು ಸಮರ್ಥವಾಗಿ ಎದುರಿಸಲು ಲಿಂಗಾಯತ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎನ್ನುವ ಒತ್ತಾಯ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ‘# ನಮ್ಮ ಸಿ.ಎಂ ಸತೀಶ ಜಾರಕಿಹೊಳಿ...’ ಅಭಿಯಾನವನ್ನು ಆರಂಭಿಸಿದ್ದಾರೆ. ಕರ್ನಾಟಕ ಸತೀಶ ಜಾರಕಿಹೊಳಿ ಯುವಸೇನೆ ಸಂಘಟನೆಯು ತನ್ನ ಫೇಸ್ಬುಕ್ನಲ್ಲಿ ಇಂತಹದೊಂದು ಪೋಸ್ಟ್ ಹಾಕಿದೆ.</p>.<p>‘ಸಿದ್ದರಾಮಯ್ಯ ನಮ್ಮ ಸಿ.ಎಂ ಅಲ್ಲ. ಸತೀಶ ನಮ್ಮ ಸಿ.ಎಂ’, ‘ನಮ್ಮ ಸಿ.ಎಂ ಸತೀಶ ಜಾರಕಿಹೊಳಿ ಮಾತ್ರ... ಇಂದು, ಮುಂದು, ಎಂದೆಂದೂ...’ ಎನ್ನುವ ಬರಹಗಳನ್ನು ಹಾಕಲಾಗಿದೆ. ಈ ಪೋಸ್ಟ್ಗೆ 244 ಜನರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.</p>.<p><strong>ಕಾಲಕೂಡಿ ಬರಬೇಕು:</strong></p>.<p>ಅಭಿಯಾನದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಸತೀಶ ಜಾರಕಿಹೊಳಿ, ‘ರಾಜ್ಯದ ಮುಖ್ಯಮಂತ್ರಿ ಆಗುವ ಆಸೆ ನನಗೂ ಇದೆ. ಅದಕ್ಕೆ ಕಾಲ ಕೂಡಿಬರಬೇಕು. ಪಕ್ಷದ ಹೈಕಮಾಂಡ್, ಶಾಸಕರು, ಮುಖಂಡರು ಈ ಬಗ್ಗೆ ನಿರ್ಧರಿಸುತ್ತಾರೆ. ನೋಡೋಣ’ ಎಂದು ಹೇಳಿದರು.</p>.<p><strong>ಲಕ್ಷ್ಮಿ ಹೆಬ್ಬಾಳಕರ ಸಹೋದರನ ಪರ ಪ್ರಚಾರ:</strong></p>.<p>ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರನ್ನು ಕಣಕ್ಕಿಳಿಸಬೇಕೆಂದು ಫೇಸ್ಬುಕ್ನಲ್ಲಿ ಕೆಲವರು ಪ್ರಚಾರ ಕೈಗೊಂಡಿದ್ದಾರೆ.</p>.<p>ಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದೇ ಸಮುದಾಯಕ್ಕೆ ಸೇರಿದ ಚನ್ನರಾಜ ಹಟ್ಟಿಹೊಳಿ ಅವರಿಗೆ ಟಿಕೆಟ್ ನೀಡಬೇಕೆಂದು ‘ಲಕ್ಷ್ಮಿ ಹೆಬ್ಬಾಳಕರ ಅಭಿಮಾನಿಗಳ ಬಳಗ’ವು ತನ್ನ ಫೇಸ್ಬುಕ್ನಲ್ಲಿ ಅಭಿಯಾನ ಆರಂಭಿಸಿದೆ.</p>.<p>ಹಾಲಿ ಈ ಕ್ಷೇತ್ರದ ಸಂಸದರಾಗಿರುವ ಬಿಜೆಪಿಯ ಸುರೇಶ ಅಂಗಡಿ ಅವರು ಕೂಡ ಲಿಂಗಾಯತರಾಗಿದ್ದು, ಇವರನ್ನು ಸಮರ್ಥವಾಗಿ ಎದುರಿಸಲು ಲಿಂಗಾಯತ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎನ್ನುವ ಒತ್ತಾಯ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>