<p><strong>ಮುನವಳ್ಳಿ</strong>: ‘ಶಿಕ್ಷಣ, ಯೋಗ, ಸಾಮಾಜಿಕ ಕಾರ್ಯದಲ್ಲಿ ಸೋಮಶೇಖರ ಮಠ ಮುಂಚೂಣಿಯಲ್ಲಿದೆ. ನನ್ನ ಅನುದಾನದಲ್ಲಿ ಇದೇ ವರ್ಷ ₹50ಲಕ್ಷ ನೀಡಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. </p>.<p>ಪಟ್ಟಣದ ಸೋಮಶೇಖರ ಮಠದ ಮುರುಘೇಂದ್ರ ಶ್ರೀಗಳ 51ನೇ ಜನ್ಮದಿನೋತ್ಸವದ ಅಂಗವಾಗಿ ಮಂಗಳವಾರ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಮಾತನಾಡಿದರು.<br><br> ಕುಂದರಗಿಯ ಅಮರಸಿದ್ದೇಶ್ವರ ಶ್ರೀ ಮಾತನಾಡಿ, ‘ಮುರುಘೇಂದ್ರ ಶ್ರೀ, ಭಕ್ತರನ್ನೆಲ್ಲ ಒಗ್ಗೂಡಿಸಿಕೊಂಡು ಸಮಾಜಕ್ಕೆ ಉಪಯುಕ್ತವಾಗುವ ಕೆಲಸ ಮಾಡುತ್ತಿದ್ದಾರೆ’ ಎಂದರು.</p>.<p>ಮುರುಘೇಂದ್ರ ಶ್ರೀ ಮಾತನಾಡಿ, ‘ಮಠವು ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆಯಲು ಹಾನಗಲ್ ಕುಮಾರೇಶ್ವರರು ಪ್ರೇರಣೆ. ಭಕ್ತರೇ ಶ್ರೀಮಠದ ಶಕ್ತಿಯಾಗಿದ್ದಾರೆ’ ಎಂದರು.</p>.<p>ಪಂಚನಗೌಡ ದ್ಯಾಮನಗೌಡರ ಪ್ರಾಸ್ತಾವಿಕ ಮಾತನಾಡಿದರು. ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ಉಪ್ಪಿನಬೆಟಗೇರಿಯ ಕುಮಾರ ವಿರೂಪಾಕ್ಷ ಶ್ರೀ ಆಶೀರ್ವಚನ ನೀಡಿದರು.<br /><br /> ಅಮೀನಗಡದ ಪ್ರಭುಶಂಕರಾಜೇಂದ್ರ ಶ್ರೀ, ಸದಾಶಿವ ಶ್ರೀ, ಬೈಲಹೊಂಗಲದ ಪ್ರಭುನೀಲಕಂಠ ಶ್ರೀ, ಸತ್ಸಂಗ ಆಶ್ರಮದ ನಿತ್ಯಾನಂದ ಶ್ರೀ, ಗೊರವನಕೊಳ್ಳದ ಶಿವಾನಂದ ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.</p>.<p>ರವೀಂದ್ರ ಯಲಿಗಾರ, ಚಂದ್ರು ಜಂಬ್ರಿ, ವಿರೂಪಾಕ್ಷ ಮಾಮನಿ, ಅರುಣಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಸೋಮಶೇಖರ ಯಲಿಗಾರ, ಶ್ರೀಕಾಂತ ನೇಗಿನಾಳ, ಈರಣ್ಣ ಸಂಕಣ್ಣವರ, ಡಾ.ಎಂ.ಬಿ.ಅಷ್ಟಗಿಮಠ, ಶಿಕ್ಷಕ ಬಿ.ಬಿ.ಹೂಲಿಗೊಪ್ಪ ಸೇರಿದಂತೆ ಅನೇಕರು ಇದ್ದರು.</p>.<p>ಅಂಗವಿಕಲ 61 ಹಿರಿಯರಿಗೆ ಊರುಗೋಲು, ಜೇವೂರು ಶಿಕ್ಷಣದ ಕಿವುಡು ಹಾಗೂ ಮೂಕ ಮಕ್ಕಳಿಗೆ ಹಾಗೂ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಶಾಲಾ ಸಲಕರಣೆಗಳನ್ನು ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುನವಳ್ಳಿ</strong>: ‘ಶಿಕ್ಷಣ, ಯೋಗ, ಸಾಮಾಜಿಕ ಕಾರ್ಯದಲ್ಲಿ ಸೋಮಶೇಖರ ಮಠ ಮುಂಚೂಣಿಯಲ್ಲಿದೆ. ನನ್ನ ಅನುದಾನದಲ್ಲಿ ಇದೇ ವರ್ಷ ₹50ಲಕ್ಷ ನೀಡಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. </p>.<p>ಪಟ್ಟಣದ ಸೋಮಶೇಖರ ಮಠದ ಮುರುಘೇಂದ್ರ ಶ್ರೀಗಳ 51ನೇ ಜನ್ಮದಿನೋತ್ಸವದ ಅಂಗವಾಗಿ ಮಂಗಳವಾರ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಮಾತನಾಡಿದರು.<br><br> ಕುಂದರಗಿಯ ಅಮರಸಿದ್ದೇಶ್ವರ ಶ್ರೀ ಮಾತನಾಡಿ, ‘ಮುರುಘೇಂದ್ರ ಶ್ರೀ, ಭಕ್ತರನ್ನೆಲ್ಲ ಒಗ್ಗೂಡಿಸಿಕೊಂಡು ಸಮಾಜಕ್ಕೆ ಉಪಯುಕ್ತವಾಗುವ ಕೆಲಸ ಮಾಡುತ್ತಿದ್ದಾರೆ’ ಎಂದರು.</p>.<p>ಮುರುಘೇಂದ್ರ ಶ್ರೀ ಮಾತನಾಡಿ, ‘ಮಠವು ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆಯಲು ಹಾನಗಲ್ ಕುಮಾರೇಶ್ವರರು ಪ್ರೇರಣೆ. ಭಕ್ತರೇ ಶ್ರೀಮಠದ ಶಕ್ತಿಯಾಗಿದ್ದಾರೆ’ ಎಂದರು.</p>.<p>ಪಂಚನಗೌಡ ದ್ಯಾಮನಗೌಡರ ಪ್ರಾಸ್ತಾವಿಕ ಮಾತನಾಡಿದರು. ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ಉಪ್ಪಿನಬೆಟಗೇರಿಯ ಕುಮಾರ ವಿರೂಪಾಕ್ಷ ಶ್ರೀ ಆಶೀರ್ವಚನ ನೀಡಿದರು.<br /><br /> ಅಮೀನಗಡದ ಪ್ರಭುಶಂಕರಾಜೇಂದ್ರ ಶ್ರೀ, ಸದಾಶಿವ ಶ್ರೀ, ಬೈಲಹೊಂಗಲದ ಪ್ರಭುನೀಲಕಂಠ ಶ್ರೀ, ಸತ್ಸಂಗ ಆಶ್ರಮದ ನಿತ್ಯಾನಂದ ಶ್ರೀ, ಗೊರವನಕೊಳ್ಳದ ಶಿವಾನಂದ ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.</p>.<p>ರವೀಂದ್ರ ಯಲಿಗಾರ, ಚಂದ್ರು ಜಂಬ್ರಿ, ವಿರೂಪಾಕ್ಷ ಮಾಮನಿ, ಅರುಣಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಸೋಮಶೇಖರ ಯಲಿಗಾರ, ಶ್ರೀಕಾಂತ ನೇಗಿನಾಳ, ಈರಣ್ಣ ಸಂಕಣ್ಣವರ, ಡಾ.ಎಂ.ಬಿ.ಅಷ್ಟಗಿಮಠ, ಶಿಕ್ಷಕ ಬಿ.ಬಿ.ಹೂಲಿಗೊಪ್ಪ ಸೇರಿದಂತೆ ಅನೇಕರು ಇದ್ದರು.</p>.<p>ಅಂಗವಿಕಲ 61 ಹಿರಿಯರಿಗೆ ಊರುಗೋಲು, ಜೇವೂರು ಶಿಕ್ಷಣದ ಕಿವುಡು ಹಾಗೂ ಮೂಕ ಮಕ್ಕಳಿಗೆ ಹಾಗೂ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಶಾಲಾ ಸಲಕರಣೆಗಳನ್ನು ವಿತರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>