<p><strong>ಬೆಳಗಾವಿ:</strong> ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾಗಿರುವ ಕೊಳಚೆ ನೀರು ಸಂಸ್ಕರಣ ಘಟಕ ಕಾರ್ಯಾರಂಭಿಸಿದೆ.</p>.<p>ಆರು ವರ್ಷಗಳ ಹಿಂದೆಯೇ ಅಂದರೆ 2012ರಲ್ಲಿ ಈ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಹಲವು ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿತ್ತು. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ನಿರ್ದೇಶಕ ಡಾ.ಷಣ್ಮುಖ ಟಿ. ಕಳಸದ ಅವರ ಮುತುವರ್ಜಿಯಿಂದಾಗಿ ಘಟಕ ಕೊನೆಗೂ ಪೂರ್ಣಗೊಂಡಿದೆ. ಕೆಲವು ದಿನಗಳ ಹಿಂದೆಯಷ್ಟೇ ನೀರು ಸಂಸ್ಕರಣೆಗೆ ಚಾಲನೆ ನೀಡಲಾಗಿದೆ. ಈ ನೀರನ್ನು ‘ನೀರ ನೆಮ್ಮದಿಯ ನಾಳೆ’ಗಳಿಗಾಗಿ ಮರುಬಳಕೆಗೆ ಉದ್ದೇಶಿಸಲಾಗಿದೆ.</p>.<p>ಆಸ್ಪತ್ರೆಯ ಕಾರ್ಯಾಗಾರದ ಸಮೀಪ ಘಟಕ ನಿರ್ಮಿಸಲಾಗಿದ್ದು, ಎರಡು ದೊಡ್ಡ ಫಿಲ್ಟರ್ಗಳನ್ನು ಅಳವಡಿಸಲಾಗಿದೆ. ಆಸ್ಪತ್ರೆ ಹಾಗೂ ವಸತಿಗೃಹಗಳಿಂದ ಸಂಗ್ರಹವಾಗುವ ಕೊಳಚೆ ನೀರನ್ನು ಸಂಸ್ಕರಣಾ ಘಟಕಕ್ಕೆ ಪಂಪ್ ಮಾಡಲಾಗುತ್ತದೆ. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೀಗೆ ದಿನಕ್ಕೆ ಮೂರು ಬಾರಿ ಸಂಸ್ಕರಣೆಗಾಗಿ ಘಟಕಕ್ಕೆ ಹರಿಸಲಾಗುತ್ತದೆ.</p>.<p class="Briefhead"><strong>ಸಸಿಗಳಿಗೆ:</strong><br />ಪೈಪ್ಲೈನ್ ಮೂಲಕ ಹರಿದುಬರುವ ಕೊಳಚೆ ನೀರನ್ನು ಸಂಗ್ರಹಿಸಲು ‘ವೆಟ್ಲ್ಯಾಂಡ್’ ಎನ್ನುವ ಟ್ಯಾಂಕ್ ನಿರ್ಮಿಸಲಾಗಿದೆ. ಅಲ್ಲಿಂದ ಘಟಕಕ್ಕೆ ಪಂಪ್ ಮಾಡಲಾಗುತ್ತದೆ. ಮೊದಲಿಗೆ ಕೊಳಚೆ ನೀರಿನಲ್ಲಿರುವ ಘನ ಪದಾರ್ಥಗಳನ್ನು ಬೇರ್ಪಡಿಸಲಾಗುತ್ತದೆ. ಸ್ಯಾಂಡ್ ಫಿಲ್ಟರ್, ಕಾರ್ಬನ್ ಫಿಲ್ಟರ್ಗಳ ಮೂಲಕ ಸಾಗಿ ಸಂಸ್ಕರಣೆಯಾಗುತ್ತದೆ. ಈ ವೇಳೆ, ಆ ನೀರಿನಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸಲು ಕ್ಲೋರಿನ್ ಮಿಶ್ರಣ ಮಾಡಲಾಗುವುದು.</p>.<p>ನೀರು ಸಂಸ್ಕರಣೆ ನಂತರ ಉಳಿಯುವ ಘನ ಪದಾರ್ಥಗಳನ್ನು ಒಣಗಿಸಿ, ಉದ್ಯಾನದ ಸಸಿಗಳಿಗೆ ಗೊಬ್ಬರವಾಗಿ ಬಳಸಿಕೊಳ್ಳಬಹುದಾಗಿದೆ.</p>.<p>‘ಘಟಕವು ನಿತ್ಯವೂ ಒಂದು ಒಂದು ಲಕ್ಷ ಲೀಟರ್ ನೀರು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ. ಮುಂದಿನ ಹಲವು ವರ್ಷಗಳ ಸ್ಥಿತಿಗತಿಗೆ ಅನುಗುಣವಾಗಿ ಪ್ರಸ್ತುತ 15ಸಾವಿರದಿಂದ 20 ಸಾವಿರ ಲೀಟರ್ನಷ್ಟು ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಈ ನೀರನ್ನು ಮರುಬಳಕೆ ಮಾಡಿಕೊಳ್ಳಲಾಗುವುದು. ಉದ್ಯಾನಕ್ಕೆ ಬಳಸಲಾಲಾಗುವುದು’ ಎಂದು ನಿರ್ದೇಶಕ ಡಾ.ಷಣ್ಮುಖ ಕಳಸದ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಇದರಿಂದ ಆಸ್ಪತ್ರೆಯ ಅಲ್ಲಲ್ಲಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುವುದು, ಅನೈರ್ಮಲ್ಯ ಸೃಷ್ಟಿಯಾಗುವುದು ತಪ್ಪಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾಗಿರುವ ಕೊಳಚೆ ನೀರು ಸಂಸ್ಕರಣ ಘಟಕ ಕಾರ್ಯಾರಂಭಿಸಿದೆ.</p>.<p>ಆರು ವರ್ಷಗಳ ಹಿಂದೆಯೇ ಅಂದರೆ 2012ರಲ್ಲಿ ಈ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಹಲವು ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿತ್ತು. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ನಿರ್ದೇಶಕ ಡಾ.ಷಣ್ಮುಖ ಟಿ. ಕಳಸದ ಅವರ ಮುತುವರ್ಜಿಯಿಂದಾಗಿ ಘಟಕ ಕೊನೆಗೂ ಪೂರ್ಣಗೊಂಡಿದೆ. ಕೆಲವು ದಿನಗಳ ಹಿಂದೆಯಷ್ಟೇ ನೀರು ಸಂಸ್ಕರಣೆಗೆ ಚಾಲನೆ ನೀಡಲಾಗಿದೆ. ಈ ನೀರನ್ನು ‘ನೀರ ನೆಮ್ಮದಿಯ ನಾಳೆ’ಗಳಿಗಾಗಿ ಮರುಬಳಕೆಗೆ ಉದ್ದೇಶಿಸಲಾಗಿದೆ.</p>.<p>ಆಸ್ಪತ್ರೆಯ ಕಾರ್ಯಾಗಾರದ ಸಮೀಪ ಘಟಕ ನಿರ್ಮಿಸಲಾಗಿದ್ದು, ಎರಡು ದೊಡ್ಡ ಫಿಲ್ಟರ್ಗಳನ್ನು ಅಳವಡಿಸಲಾಗಿದೆ. ಆಸ್ಪತ್ರೆ ಹಾಗೂ ವಸತಿಗೃಹಗಳಿಂದ ಸಂಗ್ರಹವಾಗುವ ಕೊಳಚೆ ನೀರನ್ನು ಸಂಸ್ಕರಣಾ ಘಟಕಕ್ಕೆ ಪಂಪ್ ಮಾಡಲಾಗುತ್ತದೆ. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೀಗೆ ದಿನಕ್ಕೆ ಮೂರು ಬಾರಿ ಸಂಸ್ಕರಣೆಗಾಗಿ ಘಟಕಕ್ಕೆ ಹರಿಸಲಾಗುತ್ತದೆ.</p>.<p class="Briefhead"><strong>ಸಸಿಗಳಿಗೆ:</strong><br />ಪೈಪ್ಲೈನ್ ಮೂಲಕ ಹರಿದುಬರುವ ಕೊಳಚೆ ನೀರನ್ನು ಸಂಗ್ರಹಿಸಲು ‘ವೆಟ್ಲ್ಯಾಂಡ್’ ಎನ್ನುವ ಟ್ಯಾಂಕ್ ನಿರ್ಮಿಸಲಾಗಿದೆ. ಅಲ್ಲಿಂದ ಘಟಕಕ್ಕೆ ಪಂಪ್ ಮಾಡಲಾಗುತ್ತದೆ. ಮೊದಲಿಗೆ ಕೊಳಚೆ ನೀರಿನಲ್ಲಿರುವ ಘನ ಪದಾರ್ಥಗಳನ್ನು ಬೇರ್ಪಡಿಸಲಾಗುತ್ತದೆ. ಸ್ಯಾಂಡ್ ಫಿಲ್ಟರ್, ಕಾರ್ಬನ್ ಫಿಲ್ಟರ್ಗಳ ಮೂಲಕ ಸಾಗಿ ಸಂಸ್ಕರಣೆಯಾಗುತ್ತದೆ. ಈ ವೇಳೆ, ಆ ನೀರಿನಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸಲು ಕ್ಲೋರಿನ್ ಮಿಶ್ರಣ ಮಾಡಲಾಗುವುದು.</p>.<p>ನೀರು ಸಂಸ್ಕರಣೆ ನಂತರ ಉಳಿಯುವ ಘನ ಪದಾರ್ಥಗಳನ್ನು ಒಣಗಿಸಿ, ಉದ್ಯಾನದ ಸಸಿಗಳಿಗೆ ಗೊಬ್ಬರವಾಗಿ ಬಳಸಿಕೊಳ್ಳಬಹುದಾಗಿದೆ.</p>.<p>‘ಘಟಕವು ನಿತ್ಯವೂ ಒಂದು ಒಂದು ಲಕ್ಷ ಲೀಟರ್ ನೀರು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ. ಮುಂದಿನ ಹಲವು ವರ್ಷಗಳ ಸ್ಥಿತಿಗತಿಗೆ ಅನುಗುಣವಾಗಿ ಪ್ರಸ್ತುತ 15ಸಾವಿರದಿಂದ 20 ಸಾವಿರ ಲೀಟರ್ನಷ್ಟು ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಈ ನೀರನ್ನು ಮರುಬಳಕೆ ಮಾಡಿಕೊಳ್ಳಲಾಗುವುದು. ಉದ್ಯಾನಕ್ಕೆ ಬಳಸಲಾಲಾಗುವುದು’ ಎಂದು ನಿರ್ದೇಶಕ ಡಾ.ಷಣ್ಮುಖ ಕಳಸದ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಇದರಿಂದ ಆಸ್ಪತ್ರೆಯ ಅಲ್ಲಲ್ಲಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುವುದು, ಅನೈರ್ಮಲ್ಯ ಸೃಷ್ಟಿಯಾಗುವುದು ತಪ್ಪಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>