<p><strong>ಬೆಳಗಾವಿ:</strong> ಇಲ್ಲಿನ ಕೆಎಲ್ಎಸ್– ಜಿಐಟಿಯ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ‘ಯುವಕ್ ಯೋಜನೆ’ಯಲ್ಲಿ ಹಿಮಾಚಲಪ್ರದೇಶದ ‘ಅಟಲ್ ಸುರಂಗ’ಕ್ಕೆ ಈಚೆಗೆ ಭೇಟಿ ನೀಡಿದ್ದರು.</p>.<p>ಸಿವಿಲ್ ಎಂಜಿನಿಯರಿಂಗ್ ವಿಭಾಗದ 10 ಮಂದಿ ಅಂತಿಮ ವರ್ಷದ ವಿದ್ಯಾರ್ಥಿಗಳು, ತಂಡದ ನಾಯಕ ಡಾ.ವಿಕಾಸ್ ಜಿಂಗಿನ್ ಮತ್ತು ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ವಿನಾಯಕ ಮುತಾಲಿಕ ದೇಸಾಯಿ ಅವರೊಂದಿಗೆ ಎಐಸಿಟಿಇ ಯುವಕ್ ಯೋಜನೆಯಲ್ಲಿ ಪ್ರವಾಸ ಕೈಗೊಂಡಿದ್ದರು. ಈ ಭೇಟಿ ಕೈಗೊಳ್ಳಲು ಎಐಸಿಟಿಇಯಿಂದ ₹ 2 ಲಕ್ಷ ಅನುದಾನ ಮಂಜೂರಾಗಿತ್ತು ಎಂದು ಕಾಲೇಜು ತಿಳಿಸಿದೆ.</p>.<p>ಅಟಲ್ ಸುರಂಗವು ಸಿವಿಲ್ ಎಂಜಿನಿಯರಿಂಗ್ ಕೌಶಲದ ಅದ್ಭುತವಾಗಿದೆ. ಇದನ್ನು ಲೇಹ್- ಮನಾಲಿನಲ್ಲಿ ರೋಹ್ಟಾಂಗ್ ಪಾಸ್ ಅಡಿ ನಿರ್ಮಿಸಲಾಗಿದೆ. ಈ ಸುರಂಗ ಹೆದ್ದಾರಿಯನ್ನು ಕಣಿವೆಗಳಿಗೆ ಎಲ್ಲ ರೀತಿಯ ಹವಾಮಾನ ಮಾರ್ಗವಾಗಿ ನಿರ್ಮಿಸಲಾಗಿದೆ. ಮನಾಲಿಯ ನಡುವಿನ ಒಟ್ಟಾರೆ ಅಂತರವನ್ನು ಕಡಿಮೆ ಮಾಡುತ್ತದೆ. ಇದನ್ನು ವೀಕ್ಷಿಸುವ ಅವಕಾಶ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಯತ್ನಿಸುವ ಕಾರ್ಯಕ್ರಮ ನಡೆದಿದೆ.</p>.<p>ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಡಾ.ಜಯಂತ್ ಕಿತ್ತೂರ ಮತ್ತು ಕೆಎಲ್ಎಸ್ ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಇಲ್ಲಿನ ಕೆಎಲ್ಎಸ್– ಜಿಐಟಿಯ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ‘ಯುವಕ್ ಯೋಜನೆ’ಯಲ್ಲಿ ಹಿಮಾಚಲಪ್ರದೇಶದ ‘ಅಟಲ್ ಸುರಂಗ’ಕ್ಕೆ ಈಚೆಗೆ ಭೇಟಿ ನೀಡಿದ್ದರು.</p>.<p>ಸಿವಿಲ್ ಎಂಜಿನಿಯರಿಂಗ್ ವಿಭಾಗದ 10 ಮಂದಿ ಅಂತಿಮ ವರ್ಷದ ವಿದ್ಯಾರ್ಥಿಗಳು, ತಂಡದ ನಾಯಕ ಡಾ.ವಿಕಾಸ್ ಜಿಂಗಿನ್ ಮತ್ತು ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ವಿನಾಯಕ ಮುತಾಲಿಕ ದೇಸಾಯಿ ಅವರೊಂದಿಗೆ ಎಐಸಿಟಿಇ ಯುವಕ್ ಯೋಜನೆಯಲ್ಲಿ ಪ್ರವಾಸ ಕೈಗೊಂಡಿದ್ದರು. ಈ ಭೇಟಿ ಕೈಗೊಳ್ಳಲು ಎಐಸಿಟಿಇಯಿಂದ ₹ 2 ಲಕ್ಷ ಅನುದಾನ ಮಂಜೂರಾಗಿತ್ತು ಎಂದು ಕಾಲೇಜು ತಿಳಿಸಿದೆ.</p>.<p>ಅಟಲ್ ಸುರಂಗವು ಸಿವಿಲ್ ಎಂಜಿನಿಯರಿಂಗ್ ಕೌಶಲದ ಅದ್ಭುತವಾಗಿದೆ. ಇದನ್ನು ಲೇಹ್- ಮನಾಲಿನಲ್ಲಿ ರೋಹ್ಟಾಂಗ್ ಪಾಸ್ ಅಡಿ ನಿರ್ಮಿಸಲಾಗಿದೆ. ಈ ಸುರಂಗ ಹೆದ್ದಾರಿಯನ್ನು ಕಣಿವೆಗಳಿಗೆ ಎಲ್ಲ ರೀತಿಯ ಹವಾಮಾನ ಮಾರ್ಗವಾಗಿ ನಿರ್ಮಿಸಲಾಗಿದೆ. ಮನಾಲಿಯ ನಡುವಿನ ಒಟ್ಟಾರೆ ಅಂತರವನ್ನು ಕಡಿಮೆ ಮಾಡುತ್ತದೆ. ಇದನ್ನು ವೀಕ್ಷಿಸುವ ಅವಕಾಶ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಯತ್ನಿಸುವ ಕಾರ್ಯಕ್ರಮ ನಡೆದಿದೆ.</p>.<p>ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಡಾ.ಜಯಂತ್ ಕಿತ್ತೂರ ಮತ್ತು ಕೆಎಲ್ಎಸ್ ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>