ಮಹಾಲೇಖಪಾಲರು 2018–19ನೇ ಸಾಲಿನಲ್ಲಿ ಕಚೇರಿಯಲ್ಲಿ ತಪಾಸಣೆ ನಡೆಸಿ, 2015ರಿಂದ 2018ರ 9 ದಸ್ತಾವೇಜುಗಳಿಂದ ₹12 ಕೋಟಿಗೂ ಹೆಚ್ಚಿನ ಕೊರತೆ ಕಂಡುಬಂದಿದೆ ಎಂದು ಆಕ್ಷೇಪಿಸಿದ್ದರು. ಆಸ್ತಿ ನೋಂದಣಿ ವೇಳೆ ದರವನ್ನು ಅಪಮೌಲ್ಯಗೊಳಿಸಿ ನೋಂದಣಿ ಮಾಡಲಾಗಿದೆ. ಮುದ್ರಾಂಕ ಶುಲ್ಕ ₹12,78,79,056 ಹಾಗೂ ನೋಂದಣಿ ಶುಲ್ಕ ₹12,91,707 ಕಡಿಮೆ ಆಕರಿಸಿದ್ದನ್ನು ಪತ್ತೆ ಹಚ್ಚಲಾಗಿತ್ತು. ಕೊರತೆ ಮೊತ್ತವನ್ನು ನಿಮ್ಮಿಂದ ವಸೂಲಿ ಮಾಡಬಾರದೇಕೆ ಹಾಗೂ ಅಮಾನತಿನಲ್ಲಿ ಇಡಬಾರದೇಕೆ ಎಂದು ವಿಷ್ಣುತೀರ್ಥ ಅವರಿಗೆ ನೋಟಿಸ್ ಜಾರಿಗೊಳಿಸಿ, ಸಮಜಾಯಿಷಿ ಕೇಳಲಾಗಿತ್ತು.