‘ವಾಡಿಕೆಯಿಂದ ನಡೆದು ಬಂದ ಪೂಜಾ ಕಾರ್ಯಕ್ರಮವನ್ನು ಮಾತ್ರ ವಿಧಿ–ವಿಧಾನದಂತೆ ಮಾಡಬೇಕು. ಹಿಂದಿನ ವರ್ಷಗಳಂತೆ ಸಹಸ್ರಾರು ಮಂದಿ ಸೇರಲು ಈ ಬಾರಿ ಅವಕಾಶವಿಲ್ಲ. ಅಂಗಡಿಕಾರರು ದೇವಸ್ಥಾನ ಆವರಣದಲ್ಲಾಗಲಿ, ರಸ್ತೆ ಬದಿಯಲ್ಲಾಗಲಿ ಅಥವಾ ದೇವಸ್ಥಾನದಿಂದ ಕೊಂಚ ದೂರದ ಹೊಲಗಳಲ್ಲಾಗಲಿ ಅಂಗಡಿಗಳನ್ನು ತೆರೆಯುವಂತಿಲ್ಲ. ಹಾಗೊಂದು ವೇಳೆ ಹಾಕಿದರೆ ಜಪ್ತಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.