<p><strong>ತೆಲಸಂಗ</strong>: ‘ಇಲ್ಲಿ ನ. 30ರಿಂದ 3ದಿನ ನಡೆಯಬೇಕಿದ್ದ ಯಲ್ಲಮ್ಮದೇವಿ ಜಾತ್ರೆಯನ್ನುಕೋವಿಡ್–19 ಕಾರಣದಿಂದ ರದ್ದುಪಡಿಸಲಾಗಿದೆ. ಸೂಚನೆ ಮೀರಿ ಜಾತ್ರೆ ನಡೆಸಿದರೆ ಅಥವಾ ದೇವಿ ದರ್ಶನಕ್ಕೆ ಬಂದರೆ ಪ್ರಕರಣ ದಾಖಲಿಸಲಾಗುವುದು’ ಎಂದು ಉಪ ತಹಶೀಲ್ದಾರ್ ಎಂ.ಎಸ್. ಯತ್ನಟ್ಟಿ ತಾಕೀತು ಮಾಡಿದರು.</p>.<p>ಇಲ್ಲಿನ ನಾಡ ಕಚೇರಿಯಲ್ಲಿ ಮಂಗಳವಾರ ಜಾತ್ರಾ ಸಮಿತಿಯವರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ವಾಡಿಕೆಯಿಂದ ನಡೆದು ಬಂದ ಪೂಜಾ ಕಾರ್ಯಕ್ರಮವನ್ನು ಮಾತ್ರ ವಿಧಿ–ವಿಧಾನದಂತೆ ಮಾಡಬೇಕು. ಹಿಂದಿನ ವರ್ಷಗಳಂತೆ ಸಹಸ್ರಾರು ಮಂದಿ ಸೇರಲು ಈ ಬಾರಿ ಅವಕಾಶವಿಲ್ಲ. ಅಂಗಡಿಕಾರರು ದೇವಸ್ಥಾನ ಆವರಣದಲ್ಲಾಗಲಿ, ರಸ್ತೆ ಬದಿಯಲ್ಲಾಗಲಿ ಅಥವಾ ದೇವಸ್ಥಾನದಿಂದ ಕೊಂಚ ದೂರದ ಹೊಲಗಳಲ್ಲಾಗಲಿ ಅಂಗಡಿಗಳನ್ನು ತೆರೆಯುವಂತಿಲ್ಲ. ಹಾಗೊಂದು ವೇಳೆ ಹಾಕಿದರೆ ಜಪ್ತಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.</p>.<p>ಪಿಡಿಒ ಬೀರಪ್ಪ ಕಡಗಂಚಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಲಸಂಗ</strong>: ‘ಇಲ್ಲಿ ನ. 30ರಿಂದ 3ದಿನ ನಡೆಯಬೇಕಿದ್ದ ಯಲ್ಲಮ್ಮದೇವಿ ಜಾತ್ರೆಯನ್ನುಕೋವಿಡ್–19 ಕಾರಣದಿಂದ ರದ್ದುಪಡಿಸಲಾಗಿದೆ. ಸೂಚನೆ ಮೀರಿ ಜಾತ್ರೆ ನಡೆಸಿದರೆ ಅಥವಾ ದೇವಿ ದರ್ಶನಕ್ಕೆ ಬಂದರೆ ಪ್ರಕರಣ ದಾಖಲಿಸಲಾಗುವುದು’ ಎಂದು ಉಪ ತಹಶೀಲ್ದಾರ್ ಎಂ.ಎಸ್. ಯತ್ನಟ್ಟಿ ತಾಕೀತು ಮಾಡಿದರು.</p>.<p>ಇಲ್ಲಿನ ನಾಡ ಕಚೇರಿಯಲ್ಲಿ ಮಂಗಳವಾರ ಜಾತ್ರಾ ಸಮಿತಿಯವರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ವಾಡಿಕೆಯಿಂದ ನಡೆದು ಬಂದ ಪೂಜಾ ಕಾರ್ಯಕ್ರಮವನ್ನು ಮಾತ್ರ ವಿಧಿ–ವಿಧಾನದಂತೆ ಮಾಡಬೇಕು. ಹಿಂದಿನ ವರ್ಷಗಳಂತೆ ಸಹಸ್ರಾರು ಮಂದಿ ಸೇರಲು ಈ ಬಾರಿ ಅವಕಾಶವಿಲ್ಲ. ಅಂಗಡಿಕಾರರು ದೇವಸ್ಥಾನ ಆವರಣದಲ್ಲಾಗಲಿ, ರಸ್ತೆ ಬದಿಯಲ್ಲಾಗಲಿ ಅಥವಾ ದೇವಸ್ಥಾನದಿಂದ ಕೊಂಚ ದೂರದ ಹೊಲಗಳಲ್ಲಾಗಲಿ ಅಂಗಡಿಗಳನ್ನು ತೆರೆಯುವಂತಿಲ್ಲ. ಹಾಗೊಂದು ವೇಳೆ ಹಾಕಿದರೆ ಜಪ್ತಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.</p>.<p>ಪಿಡಿಒ ಬೀರಪ್ಪ ಕಡಗಂಚಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>