<p>ರಾಯಬಾಗ: ತಾಲ್ಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ತಮ್ಮ ಜಮೀನಿಗೆ ಪರಿಹಾರ ಸಿಕ್ಕಿಲ್ಲವೆಂದು ಕೆರೆಗೆ ನೀರು ತುಂಬುವ ಕಾಮಗಾರಿಗೆ ಗುರುವಾರ ತಡೆವೊಡ್ಡಿದ ರೈತರ ಮನವೊಲಿಸುವಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಯಶಸ್ವಿಯಾದರು.</p>.<p>ಇತ್ತೀಚೆಗೆ ಕೆಲ ರೈತರ ಖಾತೆಗೆ ಸರ್ಕಾರದಿಂದ ತಲಾ ₹63 ಲಕ್ಷ ಜಮೆಯಾಗಿತ್ತು, ಇನ್ನುಳಿದ ರೈತರಿಗೆ ಸಿಗಬೇಕಾದ ಪರಿಹಾರದ ಹಣ ಸಿಕ್ಕಿಲ್ಲ. ಪರಿಹಾರ ಸಿಗೋವರೆಗೂ ಕೆರೆ ತುಂಬಿಸಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು.</p>.<p>ಬಳಿಕ ತಹಶೀಲ್ದಾರ್ ಸುರೇಶ ಮುಂಜೆ ಮಾತನಾಡಿ, ಸರ್ಕಾರದ ಯೋಜನೆಗಳಿಗೆ ಯಾರೂ ಅಡ್ಡಿ ಪಡಿಸುವಂತಿಲ್ಲ. ಅಡ್ಡಿಪಡಿಸಿದ್ದೇ ಆದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.</p>.<p>ಈ ಸಂದರ್ಭದಲ್ಲಿ ರೈತರೊಂದಿಗೆ ಮಾತನಾಡಿದ ಮಹಾವೀರ ಮೋಹಿತೆ, ‘ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿದ್ದು, ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವುದಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಈ ಭಾಗದಲ್ಲಿ ಮಳೆ ಕಡಿಮೆಯಾಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ₹100 ಕೋಟಿ ಮೊತ್ತದಲ್ಲಿ 37 ಕೆರೆ ತುಂಬುವ ಯೋಜನೆ ಜಾರಿಗೊಂಡರೆ, ಈ ಭಾಗದ ರೈತರ ಬಾಳು ಬಂಗಾರವಾಗಲಿದೆ. ಹೀಗಾಗಿ ತಮ್ಮ ಜಮೀನಿನ ಸೂಕ್ತವಾದ ದಾಖಲೆಗಳನ್ನು ನನ್ನ ಸ್ವಂತ ಹಣದಿಂದಲೇ ಕಲ್ಪಿಸಿಕೊಟ್ಟು ಪೈಪ್ ಲೈನ್ ವ್ಯವಸ್ಥೆ ಮಾಡಿಕೊಡುವೆ’ ಎಂದು ಹೇಳಿದರು.</p>.<p>ಈ ಸಂದರ್ಭದಲ್ಲಿ ರಾಯಬಾಗ ಪಿಎಸ್ಐ ಶಿವರಾಜ್ ಧರಿಗೊಂಡ, ನೀರಾವರಿ ಇಲಾಖೆಯ ಎಇಇ ಕೆ.ಸಿ.ಗಿರಿಮಲ್ಲ, ಕಂದಾಯ ನಿರೀಕ್ಷಕ ಸೋಮಶೇಖರ ಜೋರೆ, ನಾಗರಾಜ ಪತ್ತಾರ, ಅಣ್ಣಪ್ಪ ಭೂಯಿ, ಮಹೇಶ ಕೊರವಿ, ಪೋಪಟ್ ಕಾಂಬಳೆ, ರಾಕೇಶ ಕಾಂಬಳೆ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಬಾಗ: ತಾಲ್ಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ತಮ್ಮ ಜಮೀನಿಗೆ ಪರಿಹಾರ ಸಿಕ್ಕಿಲ್ಲವೆಂದು ಕೆರೆಗೆ ನೀರು ತುಂಬುವ ಕಾಮಗಾರಿಗೆ ಗುರುವಾರ ತಡೆವೊಡ್ಡಿದ ರೈತರ ಮನವೊಲಿಸುವಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಯಶಸ್ವಿಯಾದರು.</p>.<p>ಇತ್ತೀಚೆಗೆ ಕೆಲ ರೈತರ ಖಾತೆಗೆ ಸರ್ಕಾರದಿಂದ ತಲಾ ₹63 ಲಕ್ಷ ಜಮೆಯಾಗಿತ್ತು, ಇನ್ನುಳಿದ ರೈತರಿಗೆ ಸಿಗಬೇಕಾದ ಪರಿಹಾರದ ಹಣ ಸಿಕ್ಕಿಲ್ಲ. ಪರಿಹಾರ ಸಿಗೋವರೆಗೂ ಕೆರೆ ತುಂಬಿಸಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು.</p>.<p>ಬಳಿಕ ತಹಶೀಲ್ದಾರ್ ಸುರೇಶ ಮುಂಜೆ ಮಾತನಾಡಿ, ಸರ್ಕಾರದ ಯೋಜನೆಗಳಿಗೆ ಯಾರೂ ಅಡ್ಡಿ ಪಡಿಸುವಂತಿಲ್ಲ. ಅಡ್ಡಿಪಡಿಸಿದ್ದೇ ಆದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.</p>.<p>ಈ ಸಂದರ್ಭದಲ್ಲಿ ರೈತರೊಂದಿಗೆ ಮಾತನಾಡಿದ ಮಹಾವೀರ ಮೋಹಿತೆ, ‘ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿದ್ದು, ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವುದಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಈ ಭಾಗದಲ್ಲಿ ಮಳೆ ಕಡಿಮೆಯಾಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ₹100 ಕೋಟಿ ಮೊತ್ತದಲ್ಲಿ 37 ಕೆರೆ ತುಂಬುವ ಯೋಜನೆ ಜಾರಿಗೊಂಡರೆ, ಈ ಭಾಗದ ರೈತರ ಬಾಳು ಬಂಗಾರವಾಗಲಿದೆ. ಹೀಗಾಗಿ ತಮ್ಮ ಜಮೀನಿನ ಸೂಕ್ತವಾದ ದಾಖಲೆಗಳನ್ನು ನನ್ನ ಸ್ವಂತ ಹಣದಿಂದಲೇ ಕಲ್ಪಿಸಿಕೊಟ್ಟು ಪೈಪ್ ಲೈನ್ ವ್ಯವಸ್ಥೆ ಮಾಡಿಕೊಡುವೆ’ ಎಂದು ಹೇಳಿದರು.</p>.<p>ಈ ಸಂದರ್ಭದಲ್ಲಿ ರಾಯಬಾಗ ಪಿಎಸ್ಐ ಶಿವರಾಜ್ ಧರಿಗೊಂಡ, ನೀರಾವರಿ ಇಲಾಖೆಯ ಎಇಇ ಕೆ.ಸಿ.ಗಿರಿಮಲ್ಲ, ಕಂದಾಯ ನಿರೀಕ್ಷಕ ಸೋಮಶೇಖರ ಜೋರೆ, ನಾಗರಾಜ ಪತ್ತಾರ, ಅಣ್ಣಪ್ಪ ಭೂಯಿ, ಮಹೇಶ ಕೊರವಿ, ಪೋಪಟ್ ಕಾಂಬಳೆ, ರಾಕೇಶ ಕಾಂಬಳೆ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>