ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ನೆಗಡಿ, ಜ್ವರ ಬಂದರೆ ದವಾಖಾನೆಗೆ ಹೋಗಲು ಹೆದರಿಕೆ ಆಗ್ತಾ ಇದೆ. ಎಲ್ಲಿ ಕೊರೊನಾ ಎಂದು ಹೆಸರಿಟ್ಟು ಬಿಡ್ತಾರೋ ಎಂಬ ಆತಂಕದಲ್ಲಿದ್ದಾರೆ ಸಾಮಾನ್ಯ ಕಾಯಿಲೆಯುಳ್ಳ ನನ್ನಂಥವರು. ಆದರೆ, ನಮ್ಮಂಥ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧ ನೀಡಿ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ರಾಣಿ ಚನ್ನಮ್ಮ ಗ್ರಾಮೀಣ ವೈದ್ಯರ ಸಂಘದ ಸದಸ್ಯರು ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ಮಾತುಗಳನ್ನಾಡಿದವರು ಈರವ್ವ ಗುಳದಕೊಪ್ಪ.