‘ಸುವರ್ಣ ವಿಧಾನಸೌಧದ ಎದುರು ಈ ಭಾಗದ ಸ್ವಾಮೀಜಿಗಳ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದಾಗ ಸ್ವತಃ ಯಡಿಯೂರಪ್ಪ ಅವರೇ ಬಂದು ಹೋರಾಟಗಾರರಿಂದ ಮನವಿ ಸ್ವೀಕರಿಸಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಆ ವೇಳೆ ಹೋರಾಟಕ್ಕೆ ನಾವು ಯಡಿಯೂರಪ್ಪ ಅವರನ್ನು ಕರೆದಿರಲಿಲ್ಲ. ಮುಖಂಡ ಅಶೋಕ ಪೂಜಾರಿ ಅವರೇ ಕರೆಸಿದ್ದರು. ಈಗ ಪೂಜಾರಿ ಅವರನ್ನೇ ಕೇಳಬೇಕಾಗಿದೆ’ ಎಂದು ಖಾರವಾಗಿ ಹೇಳಿದರು.