ಬಳ್ಳಾರಿಯ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಕಳೆದ ನಾಲ್ಕು ದಶಕಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನವನ್ನು ಕಟ್ಟಿಕೊಂಡಿದ್ದಾರೆ. ಹಿಂದೂಸ್ತಾನಿ ಸಂಗೀತದ ಕಿರಾಣಾ ಮತ್ತು ಗ್ವಾಲಿಯರ್ ಘರಾನಾಗೆ ಸೇರಿದ ಈ ಧೀಮಂತ ಗಾಯಕನ ಖಯಾಲ್ಗಳು, ವಚನಗಳು ಮತ್ತು ದಾಸರಪದಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಪಂಡಿತ್ ವೆಂಕಟೇಶ್ ಕುಮಾರ್ ಅವರು ತಮ್ಮ ಸಂಗೀತ ಜರ್ನಿ ಬಗ್ಗೆ, ಅವರ ಜೀವನದಲ್ಲಿ ಸಂಗೀತ ಎನ್ನುವುದು ಎಷ್ಟು ಮುಖ್ಯ, ಸಂಗೀತ ಕ್ಷೇತ್ರದಲ್ಲಿ ಸಾಧಿಸಿಬೇಕೆಂದರೆ ಏನು ಮಾಡಬೇಕು ಪ್ರತಿಯೊಂದರ ಬಗ್ಗೆ ವಿವರವಾಗಿ ಹೇಳಿದ್ದಾರೆ.