<p><strong>ಮುಗಳಖೋಡ</strong>: ‘2020-21ನೇ ಸಾಲಿನಿಂದಲೂ ಕೋವಿಡ್ ಹಾವಳಿಯಿಂದ ರೈತರು ಕಂಗಾಲಾಗಿದ್ದರೂ ಶೇ 98ರಷ್ಟು ಸಾಲ ಮರುಪಾವತಿ ಮಾಡಿರುವುದು ಸಂತಸದ ವಿಷಯ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಸಾಹೇಬ ಕುಲಗೂಡೆ ಹೇಳಿದರು.</p>.<p>ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ವತಿಯಿಂದ ಫಲಾನುಭವಿಗಳಿಗೆ ಟ್ರ್ಯಾಕ್ಟರ್ ಕೀಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.</p>.<p>‘ಶೇ 3 ಬಡ್ಡಿ ದರದಲ್ಲಿ 11 ಟ್ರ್ಯಾಕ್ಟರ್ಗಳನ್ನು ವಿತರಿಸಲಾಗುತ್ತಿದೆ. ಸಕಾಲದಲ್ಲಿ ರೈತರು ಸಾಲದ ಕಂತು ಮರು ಪಾವತಿ ಮಾಡಿದ್ದರಿಂದ ಸಬ್ಸಿಡಿ ರೂಪದಲ್ಲಿ ₹ 10.04 ಕೋಟಿಯನ್ನು ಸಂಘ ಪಡೆದಿರುವುದು ವಿಶೇಷವಾಗಿದೆ. ಸಂಘದ ಅಭಿವೃದ್ಧಿಗೆ ಇದು ತುಂಬಾ ಸಹಕಾರಿಯಾಗುತ್ತದೆ’ ಎಂದರು.</p>.<p>ಡಿಸಿಸಿ ಬ್ಯಾಕ್ ರಾಯಬಾಗ ತಾಲ್ಲೂಕು ನಿಯಂತ್ರಣಾಧಿಕಾರಿ ಬಿ.ಎಸ್. ರಬಗಲ್, ‘ದೀಪಾವಳಿ ಹಬ್ಬದ ಅಂಗವಾಗಿ ನಮ್ಮ ಪಿಕೆಪಿಎಸ್ ವತಿಯಿಂದ ವಾಹನ ಸಾಲ ವಿತರಣೆ ನೀಡಲಾಗುತ್ತಿದೆ. ರಿಯಾಯಿತಿ ಕೊಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>ಅಧ್ಯಕ್ಷ ಭೀರಪ್ಪ ಶೇಗುಣಸಿ, ಉಪಾಧ್ಯಕ್ಷ ಲಕ್ಷ್ಮಣ ಗೋಕಾಕ, ನಿರ್ದೇಶಕರಾದ ಲಕ್ಷ್ಮಣ ಮುನ್ಯಾಳ, ರಾಮಚಂದ್ರ ಕುರಾಡೆ, ಕೆರೆಪ್ಪ ಮಂಟೂರ, ಚನ್ನಪ್ಪ ಯಡವಣ್ಣವರ, ಗಣಪತಿ ಕುಡ್ಡನ್ನವರ, ಮಹಾದೇವ ಉಗಾರ, ರಮೇಶ ಗುರವ, ಗೋಪಾಲ ಗೋಕಾಕ, ಅಪ್ಪಸಾಬ ಬಾಬಣ್ಣವರ, ತುಕಾರಾಮ ಗುರುವ, ಜಯಪಾಲ ಹಿಪ್ಪರಗಿ ಇದ್ದರು.</p>.<p>ಗಣಪತಿ ಕುರಾಡೆ ಸ್ವಾಗತಿಸಿದರು. ಸತೀಶಿ ಬಂದಿ ನಿರೂಪಿಸಿದರು. ಎಲ್.ಬಿ. ಮುನ್ಯಾಳ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಗಳಖೋಡ</strong>: ‘2020-21ನೇ ಸಾಲಿನಿಂದಲೂ ಕೋವಿಡ್ ಹಾವಳಿಯಿಂದ ರೈತರು ಕಂಗಾಲಾಗಿದ್ದರೂ ಶೇ 98ರಷ್ಟು ಸಾಲ ಮರುಪಾವತಿ ಮಾಡಿರುವುದು ಸಂತಸದ ವಿಷಯ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಸಾಹೇಬ ಕುಲಗೂಡೆ ಹೇಳಿದರು.</p>.<p>ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ವತಿಯಿಂದ ಫಲಾನುಭವಿಗಳಿಗೆ ಟ್ರ್ಯಾಕ್ಟರ್ ಕೀಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.</p>.<p>‘ಶೇ 3 ಬಡ್ಡಿ ದರದಲ್ಲಿ 11 ಟ್ರ್ಯಾಕ್ಟರ್ಗಳನ್ನು ವಿತರಿಸಲಾಗುತ್ತಿದೆ. ಸಕಾಲದಲ್ಲಿ ರೈತರು ಸಾಲದ ಕಂತು ಮರು ಪಾವತಿ ಮಾಡಿದ್ದರಿಂದ ಸಬ್ಸಿಡಿ ರೂಪದಲ್ಲಿ ₹ 10.04 ಕೋಟಿಯನ್ನು ಸಂಘ ಪಡೆದಿರುವುದು ವಿಶೇಷವಾಗಿದೆ. ಸಂಘದ ಅಭಿವೃದ್ಧಿಗೆ ಇದು ತುಂಬಾ ಸಹಕಾರಿಯಾಗುತ್ತದೆ’ ಎಂದರು.</p>.<p>ಡಿಸಿಸಿ ಬ್ಯಾಕ್ ರಾಯಬಾಗ ತಾಲ್ಲೂಕು ನಿಯಂತ್ರಣಾಧಿಕಾರಿ ಬಿ.ಎಸ್. ರಬಗಲ್, ‘ದೀಪಾವಳಿ ಹಬ್ಬದ ಅಂಗವಾಗಿ ನಮ್ಮ ಪಿಕೆಪಿಎಸ್ ವತಿಯಿಂದ ವಾಹನ ಸಾಲ ವಿತರಣೆ ನೀಡಲಾಗುತ್ತಿದೆ. ರಿಯಾಯಿತಿ ಕೊಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>ಅಧ್ಯಕ್ಷ ಭೀರಪ್ಪ ಶೇಗುಣಸಿ, ಉಪಾಧ್ಯಕ್ಷ ಲಕ್ಷ್ಮಣ ಗೋಕಾಕ, ನಿರ್ದೇಶಕರಾದ ಲಕ್ಷ್ಮಣ ಮುನ್ಯಾಳ, ರಾಮಚಂದ್ರ ಕುರಾಡೆ, ಕೆರೆಪ್ಪ ಮಂಟೂರ, ಚನ್ನಪ್ಪ ಯಡವಣ್ಣವರ, ಗಣಪತಿ ಕುಡ್ಡನ್ನವರ, ಮಹಾದೇವ ಉಗಾರ, ರಮೇಶ ಗುರವ, ಗೋಪಾಲ ಗೋಕಾಕ, ಅಪ್ಪಸಾಬ ಬಾಬಣ್ಣವರ, ತುಕಾರಾಮ ಗುರುವ, ಜಯಪಾಲ ಹಿಪ್ಪರಗಿ ಇದ್ದರು.</p>.<p>ಗಣಪತಿ ಕುರಾಡೆ ಸ್ವಾಗತಿಸಿದರು. ಸತೀಶಿ ಬಂದಿ ನಿರೂಪಿಸಿದರು. ಎಲ್.ಬಿ. ಮುನ್ಯಾಳ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>