ಬೆಳಗಾವಿ: ಇಲ್ಲಿನ ಬಿಜೆಪಿ ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರು ಮಹಾನಗರಪಾಲಿಕೆಯಿಂದ ಆರಂಭಿಸಿರುವ ಮೂರು ಕೋವಿಡ್ ಕೇರ್ ಕೇಂದ್ರಗಳಿಗೆ ₹ 25 ಲಕ್ಷ ಸ್ವಂತ ಖರ್ಚಿನಲ್ಲಿ ಆಮ್ಲಜನಕ ಪೂರೈಕೆ ಯಂತ್ರಗಳನ್ನು ನೀಡಲು ಯೋಜಿಸಿದ್ದು, ಮೊದಲ ಹಂತದಲ್ಲಿ ಸುಭಾಷ್ ನಗರ ಕೇಂದ್ರಕ್ಕೆ ಹತ್ತನ್ನು ಬುಧವಾರ ಅಧಿಕಾರಿಗಳಿಗೆ ಹಸ್ತಾಂತರಿಸಿದರು.