ಭಗವಂತನ ಈ ಸೃಷ್ಟಿಯಲ್ಲಿ ಮಾನವನು ಸ್ವೆಚ್ಛಾಚಾರಿಯಾಗಿ ಜೀವನ ನಡೆಸುತ್ತಿದ್ದಾನೆ. ಧಾರ್ಮಿಕ ನಂಬಿಕೆ, ದಾರ್ಶನಿಕ ಮನೋಭಾವನೆ ಕಡಿಮೆಯಾಗಿದೆ. ಅವನ ಜೀವನ ಪರಿಪೂರ್ಣವಾಗಬೇಕಾದರೆ ಸಮಾಜ ಸೇವೆ, ಧಾರ್ಮಿಕ ಶ್ರದ್ಧೆ, ಗುರು ಹಿರಿಯರ ಸೇವೆ ಅವಶ್ಯವಾಗಿ ಮಾಡಬೇಕು. ಕ್ಷಣಿಕ ಸುಖದ ವ್ಯಾಮೋಹಕ್ಕೆ ಒಳಗಾಗಿ ಶಾಶ್ವತವಾದ ಆನಂದ ಪಡೆಯುವದನ್ನು ಮರೆತಿದ್ದಾನೆ. ಬಸವಣ್ಣನವರು ಭಗವಂತನ ಸ್ಮರಣೆಯೊಂದೆ ಮಾನವನ ಆದ್ಯತೆಯಾಗಬೇಕೆಂಬುದನ್ನು ಹೀಗೆ ವಿವರಿಸಿದ್ದಾರೆ.