ಜಗತ್ತಿನ ಜನರು ಭಗವಂತನನ್ನು ಆರಾಧಿಸುತ್ತಾರೆ. ಆದರೆ ಅವನ ಮೇಲೆ ಶ್ರದ್ಧೆ, ಭಕ್ತಿ, ನಂಬಿಕೆ ಇರುವುದಿಲ್ಲ. ಭಗವಂತನನ್ನು ಅರಿಯುವ ಮಾರ್ಗವೇ ಜನರಿಗೆ ಗೊತ್ತಿಲ್ಲ. ನಂಬಿಕೆಯಿಂದ ಪ್ರಾರ್ಥಿಸಿದರೆ ಭಗವಂತ ಒಲಿಯುವದಿಲ್ಲವೆ? ನಂಬದೆ, ನೆಚ್ಚದೆ ಭಗವಂತನನ್ನು ಆರಾಧಿಸಿದರೆ, ಅದು ಅಹಂಕಾರವನ್ನು ಮನದಲ್ಲಿ ಇಟ್ಟುಕೊಂಡು ಆರಾಧಿಸಿದಂತೆ ಆಗುತ್ತದೆ ಎನ್ನುವುದು ಈ ವಚನದ ತಾತ್ಪರ್ಯವಾಗಿದೆ. ಅದನ್ನು ಪಾಲಿಸೋಣ.