<p><strong>ರಾಮದುರ್ಗ:</strong> ಸಂತ ಪರಂಪರೆಯ ತುಕಾರಾಮ ಮಹಾರಾಜ ಮತ್ತು ಏಕನಾಥ ಮಹಾರಾಜರ ಷಷ್ಠಿ ಮಹೋತ್ಸವ ಹಾಗೂ ವಿಠ್ಠಲ ರುಕ್ಮಿಣಿ ದೇವರ ಜಾತ್ರಾ ಮಹೋತ್ಸವ ನಾರಾಯಣ ಪೇಟೆಯ ಪಾಂಡುರಂಗ ದೇವಸ್ಥಾನದಲ್ಲಿ ಜರುಗಿ, ರಥೋತ್ಸವವು ಏ.2 ರಂದು ಜರುಗಲಿದೆ.</p>.<p>ಪ್ರತಿ ವರ್ಷದಂತೆ ಈ ವರ್ಷವೂ ಸಂತ ಮಹಾತ್ಮರ ಪುಣ್ಯತಿಥಿ ಅಂಗವಾಗಿ ಹರಿಮಂದಿರದಲ್ಲಿ ಸಪ್ತಾಹ ಆಚರಣೆ ಅಂಗವಾಗಿ ಪುಷ್ಪವೃಷ್ಠಿ, ಹರಿನಾಮ ಸ್ಮರಣೆ, ಪ್ರವಚನ, ಕೀರ್ತನೆಗಳು ಮತ್ತು ಭಜನೆಗಳು ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.</p>.<p>ಪ್ರತಿ ದಿನವೂ ಕೀರ್ತನೆ, ನಾಮಸ್ಮರಣೆ, ಪ್ರವಚನ ಮುಂತಾದ ಕಾರ್ಯಕ್ರಮ ನಡೆಯಲಿವೆ. ರಾಜ್ಯ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದಿಂದ ಶ್ರೇಷ್ಠ ಕೀರ್ತನಕಾರರು ಮತ್ತು ಸಂತ ಮಹಾತ್ಮರು ಪ್ರತಿ ವರ್ಷ ಇಲ್ಲಿಗೆ ಆಗಮಿಸಿ ನೆರೆದ ಭಕ್ತ ಸಮೂಹಕ್ಕೆ ತಮ್ಮ ಜ್ಞಾನ ಭಂಡಾರವನ್ನು ಧಾರೆ ಎರೆಯುವರು.</p>.<p>ಸಪ್ತಾಹದ ಕೊನೆಯ ದಿನವಾದ ಏ. 2ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗುವುದು. ನಿತ್ಯವೂ ಪ್ರಸಾದ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮದುರ್ಗ:</strong> ಸಂತ ಪರಂಪರೆಯ ತುಕಾರಾಮ ಮಹಾರಾಜ ಮತ್ತು ಏಕನಾಥ ಮಹಾರಾಜರ ಷಷ್ಠಿ ಮಹೋತ್ಸವ ಹಾಗೂ ವಿಠ್ಠಲ ರುಕ್ಮಿಣಿ ದೇವರ ಜಾತ್ರಾ ಮಹೋತ್ಸವ ನಾರಾಯಣ ಪೇಟೆಯ ಪಾಂಡುರಂಗ ದೇವಸ್ಥಾನದಲ್ಲಿ ಜರುಗಿ, ರಥೋತ್ಸವವು ಏ.2 ರಂದು ಜರುಗಲಿದೆ.</p>.<p>ಪ್ರತಿ ವರ್ಷದಂತೆ ಈ ವರ್ಷವೂ ಸಂತ ಮಹಾತ್ಮರ ಪುಣ್ಯತಿಥಿ ಅಂಗವಾಗಿ ಹರಿಮಂದಿರದಲ್ಲಿ ಸಪ್ತಾಹ ಆಚರಣೆ ಅಂಗವಾಗಿ ಪುಷ್ಪವೃಷ್ಠಿ, ಹರಿನಾಮ ಸ್ಮರಣೆ, ಪ್ರವಚನ, ಕೀರ್ತನೆಗಳು ಮತ್ತು ಭಜನೆಗಳು ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.</p>.<p>ಪ್ರತಿ ದಿನವೂ ಕೀರ್ತನೆ, ನಾಮಸ್ಮರಣೆ, ಪ್ರವಚನ ಮುಂತಾದ ಕಾರ್ಯಕ್ರಮ ನಡೆಯಲಿವೆ. ರಾಜ್ಯ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದಿಂದ ಶ್ರೇಷ್ಠ ಕೀರ್ತನಕಾರರು ಮತ್ತು ಸಂತ ಮಹಾತ್ಮರು ಪ್ರತಿ ವರ್ಷ ಇಲ್ಲಿಗೆ ಆಗಮಿಸಿ ನೆರೆದ ಭಕ್ತ ಸಮೂಹಕ್ಕೆ ತಮ್ಮ ಜ್ಞಾನ ಭಂಡಾರವನ್ನು ಧಾರೆ ಎರೆಯುವರು.</p>.<p>ಸಪ್ತಾಹದ ಕೊನೆಯ ದಿನವಾದ ಏ. 2ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗುವುದು. ನಿತ್ಯವೂ ಪ್ರಸಾದ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>