<p><strong>ಮೂಡಲಗಿ:</strong> ‘ನಾಡಿನ ಪುರಾತನ ಮಂದಿರಗಳನ್ನು ಜೀರ್ಣೋದ್ಧಾರ ಮಾಡಿ ಪೂಜೆ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅವಕಾಶ ಮಾಡಿಕೊಡುವುದು ಅವಶ್ಯವಾಗಿದೆ. ಹೆಬ್ಬಳ್ಳಿಯ ಬ್ರಹ್ಮ ಚೈತನ್ಯ ಆಶ್ರಮದ ಪರವಾಗಿ ಈ ಕಾರ್ಯವನ್ನು ಮಾಡುತ್ತಿದ್ದೇವೆ’ ಎಂದು ಆಶ್ರಮದ ಗುರು ದತ್ತ ಅವಧೂತರು ಹೇಳಿದರು.</p>.<p>ತಾಲ್ಲೂಕಿನ ಯಾದವಾಡ ಗ್ರಾಮದ ಪುರಾತನ ಭವ್ಯ ವಿಠಲ ಮಂದಿರ ಜೀರ್ಣೋದ್ಧಾರ ಕಾರ್ಯವನ್ನು ಸ್ವತಃ ಗೋಡೆ ಕಟ್ಟುವ ಮೂಲಕ ಚಾಲನೆ ನೀಡಿದರು.</p>.<p>‘ಬ್ರಹ್ಮ ಚೈತನ್ಯ ಆಶ್ರಮದ ಪರವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುಮಾರು 150 ಹಳೆಯ ಮಂದಿರಗಳ ಜೀರ್ಣೋದ್ಧಾರ ಕಾರ್ಯ ಮಾಡಲಾಗಿದೆ .ಹೆಬ್ಬಳ್ಳಿ, ಸವಣೂರು, ಹುಬ್ಬಳ್ಳಿ ಪಟ್ಟಣಗಳಲ್ಲಿ ಹೊಸ ಮಂದಿರಗಳನ್ನು ಕೂಡ ನಿರ್ಮಿಸಲಾಗಿದೆ. ಯಾದವಾಡದಲ್ಲಿ 5 ಮಂದಿರಗಳ ಜೀರ್ಣೋದ್ಧಾರ ಕಾರ್ಯ ಹಮ್ಮಿಕೊಳ್ಳಲಾಗಿದೆ’ ಎಂದರು.</p>.<p>ಮಂದಿರಗಳು ಧಾರ್ಮಿಕ ಸಂಕೇತಗಳು ಮಾತ್ರವಲ್ಲ.ಅವು ಭಾರತೀಯ ಸಂಸ್ಕೃತಿ ಪ್ರತೀಕಗಳಾಗಿವೆ. ಮಂದಿರಗಳು ಜನಕ್ಕೆ ನೆಮ್ಮದಿ ,ಸಂತೋಷ ಮತ್ತು ಆಶ್ರಯವನ್ನು ಕೊಡುತ್ತವೆ ಎಂದು ಹೇಳಿದರು.</p>.<p>ಯಾದವಾಡದಲ್ಲಿ ವಿಠ್ಠಲ ಮಂದಿರ ಇರುವುದು ವಿಶೇಷವಾಗಿದ್ದು,ಇದು ಕರ್ನಾಟಕ ಮತ್ತು ಮಹಾರಾಷ್ಟ್ರದ ಐಕ್ಯತೆಯ ಪ್ರತೀಕವಾಗಿದೆ ಎಂದು ತಿಳಿಸಿದರು. </p>.<p>ನಿವೃತ್ತ ತಹಶೀಲ್ದಾರ್ ಚಿದಂಬರ ನಾಮದಾರ್ ಮಾತನಾಡಿ, ವಿಠ್ಠಲ ಮಂದಿರದಲ್ಲಿ ಪೂಜೆ ,ಪ್ರವಚನ,ಧಾರ್ಮಿಕ ಕಾರ್ಯಗಳನ್ನು ಎರಡು ವರ್ಷಗಳಿಂದ ಸಂಘಟಿಸುತ್ತಿದ್ದಾರೆ .ಜನರಲ್ಲಿ ಧಾರ್ಮಿಕ ಶ್ರದ್ಧೆ ಹಾಗೂ ಐಕ್ಯತೆಯನ್ನು ಬೆಳೆಸುತ್ತಿದ್ದಾರ ಎಂದರು.</p>.<p>ಹೆಬ್ಬಳ್ಳಿ ಹಾಗೂ ಯಾದವಾಡದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಲಗಿ:</strong> ‘ನಾಡಿನ ಪುರಾತನ ಮಂದಿರಗಳನ್ನು ಜೀರ್ಣೋದ್ಧಾರ ಮಾಡಿ ಪೂಜೆ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅವಕಾಶ ಮಾಡಿಕೊಡುವುದು ಅವಶ್ಯವಾಗಿದೆ. ಹೆಬ್ಬಳ್ಳಿಯ ಬ್ರಹ್ಮ ಚೈತನ್ಯ ಆಶ್ರಮದ ಪರವಾಗಿ ಈ ಕಾರ್ಯವನ್ನು ಮಾಡುತ್ತಿದ್ದೇವೆ’ ಎಂದು ಆಶ್ರಮದ ಗುರು ದತ್ತ ಅವಧೂತರು ಹೇಳಿದರು.</p>.<p>ತಾಲ್ಲೂಕಿನ ಯಾದವಾಡ ಗ್ರಾಮದ ಪುರಾತನ ಭವ್ಯ ವಿಠಲ ಮಂದಿರ ಜೀರ್ಣೋದ್ಧಾರ ಕಾರ್ಯವನ್ನು ಸ್ವತಃ ಗೋಡೆ ಕಟ್ಟುವ ಮೂಲಕ ಚಾಲನೆ ನೀಡಿದರು.</p>.<p>‘ಬ್ರಹ್ಮ ಚೈತನ್ಯ ಆಶ್ರಮದ ಪರವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುಮಾರು 150 ಹಳೆಯ ಮಂದಿರಗಳ ಜೀರ್ಣೋದ್ಧಾರ ಕಾರ್ಯ ಮಾಡಲಾಗಿದೆ .ಹೆಬ್ಬಳ್ಳಿ, ಸವಣೂರು, ಹುಬ್ಬಳ್ಳಿ ಪಟ್ಟಣಗಳಲ್ಲಿ ಹೊಸ ಮಂದಿರಗಳನ್ನು ಕೂಡ ನಿರ್ಮಿಸಲಾಗಿದೆ. ಯಾದವಾಡದಲ್ಲಿ 5 ಮಂದಿರಗಳ ಜೀರ್ಣೋದ್ಧಾರ ಕಾರ್ಯ ಹಮ್ಮಿಕೊಳ್ಳಲಾಗಿದೆ’ ಎಂದರು.</p>.<p>ಮಂದಿರಗಳು ಧಾರ್ಮಿಕ ಸಂಕೇತಗಳು ಮಾತ್ರವಲ್ಲ.ಅವು ಭಾರತೀಯ ಸಂಸ್ಕೃತಿ ಪ್ರತೀಕಗಳಾಗಿವೆ. ಮಂದಿರಗಳು ಜನಕ್ಕೆ ನೆಮ್ಮದಿ ,ಸಂತೋಷ ಮತ್ತು ಆಶ್ರಯವನ್ನು ಕೊಡುತ್ತವೆ ಎಂದು ಹೇಳಿದರು.</p>.<p>ಯಾದವಾಡದಲ್ಲಿ ವಿಠ್ಠಲ ಮಂದಿರ ಇರುವುದು ವಿಶೇಷವಾಗಿದ್ದು,ಇದು ಕರ್ನಾಟಕ ಮತ್ತು ಮಹಾರಾಷ್ಟ್ರದ ಐಕ್ಯತೆಯ ಪ್ರತೀಕವಾಗಿದೆ ಎಂದು ತಿಳಿಸಿದರು. </p>.<p>ನಿವೃತ್ತ ತಹಶೀಲ್ದಾರ್ ಚಿದಂಬರ ನಾಮದಾರ್ ಮಾತನಾಡಿ, ವಿಠ್ಠಲ ಮಂದಿರದಲ್ಲಿ ಪೂಜೆ ,ಪ್ರವಚನ,ಧಾರ್ಮಿಕ ಕಾರ್ಯಗಳನ್ನು ಎರಡು ವರ್ಷಗಳಿಂದ ಸಂಘಟಿಸುತ್ತಿದ್ದಾರೆ .ಜನರಲ್ಲಿ ಧಾರ್ಮಿಕ ಶ್ರದ್ಧೆ ಹಾಗೂ ಐಕ್ಯತೆಯನ್ನು ಬೆಳೆಸುತ್ತಿದ್ದಾರ ಎಂದರು.</p>.<p>ಹೆಬ್ಬಳ್ಳಿ ಹಾಗೂ ಯಾದವಾಡದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>