ಸವದತ್ತಿ: ಮಲಪ್ರಭಾ ನದಿಯು ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನದಿಪಾತ್ರದ ಜನತೆಗೆ ಸೂಚನೆ ನೀಡಲಾಗಿದೆ.
ನವಿಲುತೀರ್ಥ ಜಲಾಶಯದ ಭರ್ತಿಗೆ ಕೆಲವೇ ಅಡಿಗಳು ಬಾಕಿ ಇದೆ.ಸದ್ಯ ಬರುವ ಒಳಹರಿವನ್ನು ತಡೆ ಹಿಡಿದರೆ ಕೇವಲ 2 ದಿನಗಳಲ್ಲಿ ಜಲಾಶಯದ ಭರ್ತಿಯಾಗುವ ಸಂಭವವಿದೆ. ಜಲಾಶಯದ ಭದ್ರತೆ, ಒಳಹರಿವು ಪರಿಗ ಣಿಸಿ ನೀರನ್ನು ಸಂಗ್ರಹಿಸಲಾಗುತ್ತಿದೆ.
ಗುರುವಾರ 15 ಸಾವಿರ ಕ್ಯುಸೆಕ್ ಇದ್ದ ಒಳಹರಿವು ಶುಕ್ರವಾರ 20 ಸಾವಿರ ಕ್ಯುಸೆಕ್ಗೆ ತಲುಪಿದೆ. ಗುರುವಾರ ನಾಲ್ಕು ಗೇಟ್ ತೆರೆದು 5 ಸಾವಿರ ಕ್ಯುಸೆಕ್ಗೂ ಅಧಿಕ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ ಎಂದು ಜಲಾಶಯದ ಎಂಜಿನಿಯರ್ ವಿವೇಕ ಮುದಿಗೌಡರ ತಿಳಿಸಿದ್ದಾರೆ.