<p><strong>ಬೆಳಗಾವಿ: </strong>‘ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವ ಕೆಲಸ ನಡೆಯಬೇಕು. ಪ್ರತಿ ನಾಗರಿಕರೂ ತಿಳಿವಳಿಕೆ ಹೊಂದಿರಬೇಕು’ ಎಂದು ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಡಾ.ಎಸ್.ಆರ್. ಯಾದವ ಹೇಳಿದರು.</p>.<p>ಇಲ್ಲಿನ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಭಾವುರಾವ ಕಾಕತಕರ ಕಾಲೇಜಿನ ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ವನ್ಯಜೀವಿ ಸಂರಕ್ಷಣೆ’ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ವನ್ಯಜೀವಿಗಳ ಬೆಳವಣಿಗೆಗೆ ಕಾಡಿನಲ್ಲಿ ಹುಲ್ಲುಗಾವಲು ಇರಬೇಕು. ಹುಲಿಗೂ ಹುಲ್ಲಿಗೂ ಸಂಬಂಧವಿದೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ವಕೀಲ ರಾಜಾಭಾವು ಪಾಟೀಲ, ‘ಅರಣ್ಯ ಸಂಪತ್ತು ವೃದ್ಧಿಯಾದರೆ ಕಾಡು ಪ್ರಾಣಿಗಳು ಬದುಕಲು ಪೂರಕ ವಾತಾವರಣ ಇರುತ್ತದೆ’ ಎಂದು ಹೇಳಿದರು.</p>.<p>ಡಾ.ನೀತಾ ಜಾಧವ, ಡಾ.ಎಸ್.ಎನ್. ಪಾಟೀಲ, ಪ್ರೊ.ಎಸ್.ವೈ. ಪ್ರಭು, ಆಡಳಿತ ಮಂಡಳಿ ಸದಸ್ಯ ದೀಪಕ ದೇಸಾಯಿ ಇದ್ದರು.</p>.<p>ಪ್ರಿಯಾಂಕಾ ಗುರವ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಎಸ್.ಎನ್. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಡಾ.ನೀತಾ ಜಾಧವ ಪರಿಚಯಿಸಿದರು. ರಸಿಕಾ ಇಂಗಳೆ ಮತ್ತು ಶ್ರದ್ಧಾ ಮೋರೆ ನಿರೂಪಿಸಿದರು. ಸಮಯ ಶಹಾಪುರವಾಲೆ ವಂದಿಸಿದರು.</p>.<p>ನಂತರ ಗೋಷ್ಠಿಗಳು ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>‘ಅರಣ್ಯ ಮತ್ತು ವನ್ಯಜೀವಿಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವ ಕೆಲಸ ನಡೆಯಬೇಕು. ಪ್ರತಿ ನಾಗರಿಕರೂ ತಿಳಿವಳಿಕೆ ಹೊಂದಿರಬೇಕು’ ಎಂದು ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಡಾ.ಎಸ್.ಆರ್. ಯಾದವ ಹೇಳಿದರು.</p>.<p>ಇಲ್ಲಿನ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಭಾವುರಾವ ಕಾಕತಕರ ಕಾಲೇಜಿನ ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ವನ್ಯಜೀವಿ ಸಂರಕ್ಷಣೆ’ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ವನ್ಯಜೀವಿಗಳ ಬೆಳವಣಿಗೆಗೆ ಕಾಡಿನಲ್ಲಿ ಹುಲ್ಲುಗಾವಲು ಇರಬೇಕು. ಹುಲಿಗೂ ಹುಲ್ಲಿಗೂ ಸಂಬಂಧವಿದೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ವಕೀಲ ರಾಜಾಭಾವು ಪಾಟೀಲ, ‘ಅರಣ್ಯ ಸಂಪತ್ತು ವೃದ್ಧಿಯಾದರೆ ಕಾಡು ಪ್ರಾಣಿಗಳು ಬದುಕಲು ಪೂರಕ ವಾತಾವರಣ ಇರುತ್ತದೆ’ ಎಂದು ಹೇಳಿದರು.</p>.<p>ಡಾ.ನೀತಾ ಜಾಧವ, ಡಾ.ಎಸ್.ಎನ್. ಪಾಟೀಲ, ಪ್ರೊ.ಎಸ್.ವೈ. ಪ್ರಭು, ಆಡಳಿತ ಮಂಡಳಿ ಸದಸ್ಯ ದೀಪಕ ದೇಸಾಯಿ ಇದ್ದರು.</p>.<p>ಪ್ರಿಯಾಂಕಾ ಗುರವ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಎಸ್.ಎನ್. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಡಾ.ನೀತಾ ಜಾಧವ ಪರಿಚಯಿಸಿದರು. ರಸಿಕಾ ಇಂಗಳೆ ಮತ್ತು ಶ್ರದ್ಧಾ ಮೋರೆ ನಿರೂಪಿಸಿದರು. ಸಮಯ ಶಹಾಪುರವಾಲೆ ವಂದಿಸಿದರು.</p>.<p>ನಂತರ ಗೋಷ್ಠಿಗಳು ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>