‘ಮಾನವ ಕಂಪ್ಯೂಟರ್’ ಎಂದೇ ಖ್ಯಾತರಾದ ಬಸವರಾಜ ಉಮರಾಣಿ ಅವರು ಗಣಿತದ ಕೌಶಲದ ಕುರಿತು ಮಾತನಾಡಿದರು. ‘ನಾದಸುಧಾ’ ಸುಗಮ ಸಂಗೀತ ಶಾಲೆಯ ಮುಖ್ಯಸ್ಥ ಸತ್ಯನಾರಾಯಣ ಅವರ ತಂಡದ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಪುನೀತ್ ರಾಜ್ಕುಮಾರ್ ಗೌರವಾರ್ಥ ‘ಕಾಣದಂತೆ ಮಾಯವಾದನು’ ಹಾಡನ್ನು ಸಾತ್ವಿಕ ಭಂಡಾರಿ ಹಾಡಿದರು. ಮಾನ್ಯಾ ಹಲಗಿ, ದಿವ್ಯಾ ಅಂಕಲೆ, ಬೇಬಿ ಧನ್ಯಾ ಹಾಗೂ ಡಾ.ಸಂಪ್ರೀತಾ ಭಾಗವಹಿಸಿದ್ದರು. ಪ್ರೇಮಾ ಉಪಾಧ್ಯೆ ನಿರ್ವಹಿಸಿದರು.