<p><strong>ತೆಲಸಂಗ:</strong> ‘ಕೋವಿಡ್–19 ಕಾಣಿಸಿಕೊಂಡಾಗಿನಿಂದ ವೃತ್ತಿ ರಂಗಭೂಮಿ ಕಲಾವಿದರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಅವರು ವೃತ್ತಿ ತೊರೆಯದಂತೆ ನೋಡಿಕೊಳ್ಳುವ ಕೆಲಸ ನಡೆಯದಿದ್ದಲ್ಲಿ ರಂಗಭೂಮಿ ಬಡವಾಗುವುದರಲ್ಲಿ ಸಂದೇಹವಿಲ್ಲ’ ಎಂದು ಕಲಾವಿದ ಜೂನಿಯರ್ ವಿಷ್ಣುವರ್ಧನ್ ಖ್ಯಾತಿಯ ರವಿ ಕೊರೆ ಹೇಳಿದರು.</p>.<p>ಸಮೀಪದ ಕೊಕೊಟನೂರ ಗ್ರಾಮದ ಬಸವೇಶ್ವರ ಜಾತ್ರೆ ಅಂಗವಾಗಿ ನಡೆದ ಮನರಂಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕೋವಿಡ್ನಿಂದಾಗಿ ನಾಟಕ ಕಂಪನಿಗಳು ಬಂದ್ ಆಗಿವೆ. ಕಲಾವಿದರು ಜೀವನ ನಿರ್ವಹಣೆಗಾಗಿ ಬೇರೆ ಉದ್ಯೋಗವನ್ನು ಅರಸಿ ಹೋಗುತ್ತಿದ್ದಾರೆ. ಹೀಗೆ ಹೋದವರು ರಂಗಭೂಮಿಗೆ ಮರಳದಿದ್ದರೆ ನಾಡಿನ ಸಂಸ್ಕೃತಿಯ ಹಾಗೂ ಸಂಸ್ಕಾರದ ಶಕ್ತಿಯಾದ ರಂಗಭೂಮಿ ಮತ್ತಷ್ಟು ಬಡವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಹಾಸ್ಯ ಕಲಾವಿದ ಚಿದಾನಂದ ಕಾಂಬಳೆ, ‘ಜೀವನದುದ್ದಕ್ಕೂ ತಮ್ಮನ್ನು ಕಲಾ ಸೇವೆಗೆ ಮುಡಿಪಾಗಿಟ್ಟವರು ಇಂದು ಬೀದಿಗೆ ಬರುವಂತಾಗಿದೆ. ಸರ್ಕಾರ ಅವರ ಕೈಹಿಡಿಯಬೇಕು’ ಎಂದರು.</p>.<p>ದೇವಸ್ಥಾನ ಸಮಿತಿ ಅಧ್ಯಕ್ಷ ಐ.ಸಿ. ನೇಮಗೌಡ, ಮಾಜಿ ಸೈನಿಕ ಮುನ್ನಾ ಕರಜಗಿ, ಗಾಯಕ ರಾಜು ಹೊನಕಾಂಬಳೆ, ಕಾರ್ಯದರ್ಶಿ ರಮೇಶ ಐಗಳಿ, ಆಲಗೌಡ ಸವದಿ, ಸುರೇಶ ನೇಮಗೌಡ, ಗಂಗಪ್ಪ ರಡೆರಹಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಲಸಂಗ:</strong> ‘ಕೋವಿಡ್–19 ಕಾಣಿಸಿಕೊಂಡಾಗಿನಿಂದ ವೃತ್ತಿ ರಂಗಭೂಮಿ ಕಲಾವಿದರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಅವರು ವೃತ್ತಿ ತೊರೆಯದಂತೆ ನೋಡಿಕೊಳ್ಳುವ ಕೆಲಸ ನಡೆಯದಿದ್ದಲ್ಲಿ ರಂಗಭೂಮಿ ಬಡವಾಗುವುದರಲ್ಲಿ ಸಂದೇಹವಿಲ್ಲ’ ಎಂದು ಕಲಾವಿದ ಜೂನಿಯರ್ ವಿಷ್ಣುವರ್ಧನ್ ಖ್ಯಾತಿಯ ರವಿ ಕೊರೆ ಹೇಳಿದರು.</p>.<p>ಸಮೀಪದ ಕೊಕೊಟನೂರ ಗ್ರಾಮದ ಬಸವೇಶ್ವರ ಜಾತ್ರೆ ಅಂಗವಾಗಿ ನಡೆದ ಮನರಂಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕೋವಿಡ್ನಿಂದಾಗಿ ನಾಟಕ ಕಂಪನಿಗಳು ಬಂದ್ ಆಗಿವೆ. ಕಲಾವಿದರು ಜೀವನ ನಿರ್ವಹಣೆಗಾಗಿ ಬೇರೆ ಉದ್ಯೋಗವನ್ನು ಅರಸಿ ಹೋಗುತ್ತಿದ್ದಾರೆ. ಹೀಗೆ ಹೋದವರು ರಂಗಭೂಮಿಗೆ ಮರಳದಿದ್ದರೆ ನಾಡಿನ ಸಂಸ್ಕೃತಿಯ ಹಾಗೂ ಸಂಸ್ಕಾರದ ಶಕ್ತಿಯಾದ ರಂಗಭೂಮಿ ಮತ್ತಷ್ಟು ಬಡವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>ಹಾಸ್ಯ ಕಲಾವಿದ ಚಿದಾನಂದ ಕಾಂಬಳೆ, ‘ಜೀವನದುದ್ದಕ್ಕೂ ತಮ್ಮನ್ನು ಕಲಾ ಸೇವೆಗೆ ಮುಡಿಪಾಗಿಟ್ಟವರು ಇಂದು ಬೀದಿಗೆ ಬರುವಂತಾಗಿದೆ. ಸರ್ಕಾರ ಅವರ ಕೈಹಿಡಿಯಬೇಕು’ ಎಂದರು.</p>.<p>ದೇವಸ್ಥಾನ ಸಮಿತಿ ಅಧ್ಯಕ್ಷ ಐ.ಸಿ. ನೇಮಗೌಡ, ಮಾಜಿ ಸೈನಿಕ ಮುನ್ನಾ ಕರಜಗಿ, ಗಾಯಕ ರಾಜು ಹೊನಕಾಂಬಳೆ, ಕಾರ್ಯದರ್ಶಿ ರಮೇಶ ಐಗಳಿ, ಆಲಗೌಡ ಸವದಿ, ಸುರೇಶ ನೇಮಗೌಡ, ಗಂಗಪ್ಪ ರಡೆರಹಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>