ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಪ್ರತಿಭಟನೆ ನಡೆಯುತ್ತಿದೆ ಎಂದು ಬಿಂಬಿಸಿ ತಹಶೀಲ್ದಾರ್ ಕಚೇರಿಯ ಗೇಟ್ ಮುಚ್ಚಲಾಗಿತ್ತು. ಮೂವತ್ತು ನಲವತ್ತು ಜನ ಹೊರಗೆ ಕುಳಿತಿದ್ದರು. ಆದರೆ, ಅವರು ಧಿಕ್ಕಾರ ಕೂಗಲಿಲ್ಲ. ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಗ್ಗೆಯೂ ಮಾಹಿತಿ ಇಲ್ಲ. ಸರ್ಕಾರಿ ಕಚೇರಿಯನ್ನು ಹೀಗೆ ಬಂದ್ ಮಾಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ’ ಎಂದು ದೂರಿದರು.