<p><strong>ಬೆಳಗಾವಿ: </strong>‘ಏನೆಲ್ಲಾ ಸಾಧನೆ ತೋರಿದ್ದರೂ ಹೆಣ್ಣನ್ನು ನೋಡುವ ಸಮಾಜದ ಮನೋಭಾವ ಬದಲಾಗಿಲ್ಲ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ.ನೀತಾ ರಾವ್ ವಿಷಾದಿಸಿದರು.</p>.<p>ಇಲ್ಲಿನ ಸಂಗೊಳ್ಳಿ ರಾಯಣ್ಣ ಘಟಕ ಕಾಲೇಜಿನಲ್ಲಿ ಬುಧವಾರ ನಡೆದ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ಮಹಿಳಾ ಸಬಲೀಕರಣ ಕೋಶ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಮ್ಮ ಹಕ್ಕುಗಳನ್ನು ನಾವು ಪ್ರತಿಪಾದಿಸಬೇಕು. ಬದಲಾಗುತ್ತಿದ್ದೇನೆಂಬ ಮುಖವಾಡ ಕಳಚಿ ವಾಸ್ತವ ನೆಲೆಯಲ್ಲಿ ಬದುಕಬೇಕು’ ಎಂದರು.</p>.<p>‘ಮಹಿಳಾ ಸಬಲೀಕರಣ ಘಟಕದಿಂದ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಯುವತಿಯರು ಪದವಿ ಶಿಕ್ಷಣ ಮೊಟಕುಗೊಳಿಸದಂತೆ ಕಾಲೇಜಿನವರು ನೋಡಿಕೊಳ್ಳಬೇಕು. ಕೌನ್ಸೆಲಿಂಗ್ ಚಟುವಟಿಕೆಗಳನ್ನೂ ನಡೆಸಬೇಕು. ಶಿಕ್ಷಣದಿಂದ ಮಾತ್ರ ಮಹಿಳಾ ಶಿಕ್ಷಣ ಸಾಧ್ಯವಾಗಲಿದೆ’ ಎಂದರು.</p>.<p>ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಮಂಗಳಾ ಹುಗ್ಗಿ, ‘ಶಿಕ್ಷಣ ಕೇವಲ ಜ್ಞಾನಾರ್ಜನೆ ಅಥವಾ ಪದವಿಗೆ ಮಾತ್ರ ಸೀಮಿತವಾಗದೆ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬೇಕು’ ಎಂದರು.</p>.<p>‘ಹೆಣ್ಣನ್ನು ಪೂಜಿಸುವುದಕ್ಕಿಂತಲೂ ಗೌರವಿಸಬೇಕು. ವಾಸ್ತವದಲ್ಲಿ ಮಹಿಳೆ ಪುರುಷರಿಗಿಂತಲೂ ಎಲ್ಲ ಕೆಲಸಗಳನ್ನು ನಿಭಾಯಿಸುವಂತ ಮಹೋನ್ನತ ಶಕ್ತಿ ಹೊಂದಿದ್ದಾಳೆ’ ಎಂದು ತಿಳಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಂ. ಜಯಪ್ಪ, ‘ಹಿಂದಿನ ಹಾಗೂ ಇಂದಿನ ಮಹಿಳೆ ಎದುರಿಸುವ ಸಮಸ್ಯೆಗಳು ಬಹು ಭಿನ್ನವಾಗಿವೆ. ಆ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕಾದ ಜವಾಬ್ದಾರಿ ಮಹಿಳೆಯರ ಮೇಲೆಯೇ ಇದೆ. ಪ್ರಕೃತಿದತ್ತವಾಗಿ ಮಹಿಳೆಗೆ ಬಂದ ಬದುಕಿನ ವಾತಾವರಣವನ್ನು ಸಮಾಜ ಎಂದಿಗೂ ಕಸಿದುಕೊಳ್ಳಬಾರದು’ ಎಂದರು.</p>.<p>ವಿದ್ಯಾರ್ಥಿನಿ ರಾಖಿ ಕೆಳಗಿನಮನಿ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಯಾಸ್ಮಿನ್ ಬೇಗಂ ನದಾಫ್ ಸ್ವಾಗತಿಸಿದರು. ಡಾ.ಶೋಭಾ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಡಾ.ಜ್ಯೋತಿ ಪಾಟೀಲ ನಿರೂಪಿಸಿದರು. ಉಪ ಪ್ರಾಚಾರ್ಯ ಅನಿಲ ರಾಮದುರ್ಗ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>‘ಏನೆಲ್ಲಾ ಸಾಧನೆ ತೋರಿದ್ದರೂ ಹೆಣ್ಣನ್ನು ನೋಡುವ ಸಮಾಜದ ಮನೋಭಾವ ಬದಲಾಗಿಲ್ಲ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ.ನೀತಾ ರಾವ್ ವಿಷಾದಿಸಿದರು.</p>.<p>ಇಲ್ಲಿನ ಸಂಗೊಳ್ಳಿ ರಾಯಣ್ಣ ಘಟಕ ಕಾಲೇಜಿನಲ್ಲಿ ಬುಧವಾರ ನಡೆದ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ಮಹಿಳಾ ಸಬಲೀಕರಣ ಕೋಶ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ನಮ್ಮ ಹಕ್ಕುಗಳನ್ನು ನಾವು ಪ್ರತಿಪಾದಿಸಬೇಕು. ಬದಲಾಗುತ್ತಿದ್ದೇನೆಂಬ ಮುಖವಾಡ ಕಳಚಿ ವಾಸ್ತವ ನೆಲೆಯಲ್ಲಿ ಬದುಕಬೇಕು’ ಎಂದರು.</p>.<p>‘ಮಹಿಳಾ ಸಬಲೀಕರಣ ಘಟಕದಿಂದ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಯುವತಿಯರು ಪದವಿ ಶಿಕ್ಷಣ ಮೊಟಕುಗೊಳಿಸದಂತೆ ಕಾಲೇಜಿನವರು ನೋಡಿಕೊಳ್ಳಬೇಕು. ಕೌನ್ಸೆಲಿಂಗ್ ಚಟುವಟಿಕೆಗಳನ್ನೂ ನಡೆಸಬೇಕು. ಶಿಕ್ಷಣದಿಂದ ಮಾತ್ರ ಮಹಿಳಾ ಶಿಕ್ಷಣ ಸಾಧ್ಯವಾಗಲಿದೆ’ ಎಂದರು.</p>.<p>ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಮಂಗಳಾ ಹುಗ್ಗಿ, ‘ಶಿಕ್ಷಣ ಕೇವಲ ಜ್ಞಾನಾರ್ಜನೆ ಅಥವಾ ಪದವಿಗೆ ಮಾತ್ರ ಸೀಮಿತವಾಗದೆ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬೇಕು’ ಎಂದರು.</p>.<p>‘ಹೆಣ್ಣನ್ನು ಪೂಜಿಸುವುದಕ್ಕಿಂತಲೂ ಗೌರವಿಸಬೇಕು. ವಾಸ್ತವದಲ್ಲಿ ಮಹಿಳೆ ಪುರುಷರಿಗಿಂತಲೂ ಎಲ್ಲ ಕೆಲಸಗಳನ್ನು ನಿಭಾಯಿಸುವಂತ ಮಹೋನ್ನತ ಶಕ್ತಿ ಹೊಂದಿದ್ದಾಳೆ’ ಎಂದು ತಿಳಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಂ. ಜಯಪ್ಪ, ‘ಹಿಂದಿನ ಹಾಗೂ ಇಂದಿನ ಮಹಿಳೆ ಎದುರಿಸುವ ಸಮಸ್ಯೆಗಳು ಬಹು ಭಿನ್ನವಾಗಿವೆ. ಆ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕಾದ ಜವಾಬ್ದಾರಿ ಮಹಿಳೆಯರ ಮೇಲೆಯೇ ಇದೆ. ಪ್ರಕೃತಿದತ್ತವಾಗಿ ಮಹಿಳೆಗೆ ಬಂದ ಬದುಕಿನ ವಾತಾವರಣವನ್ನು ಸಮಾಜ ಎಂದಿಗೂ ಕಸಿದುಕೊಳ್ಳಬಾರದು’ ಎಂದರು.</p>.<p>ವಿದ್ಯಾರ್ಥಿನಿ ರಾಖಿ ಕೆಳಗಿನಮನಿ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಯಾಸ್ಮಿನ್ ಬೇಗಂ ನದಾಫ್ ಸ್ವಾಗತಿಸಿದರು. ಡಾ.ಶೋಭಾ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಡಾ.ಜ್ಯೋತಿ ಪಾಟೀಲ ನಿರೂಪಿಸಿದರು. ಉಪ ಪ್ರಾಚಾರ್ಯ ಅನಿಲ ರಾಮದುರ್ಗ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>