ಕಳೆದ ಒಂದು ತಿಂಗಳಿಂದ ಇಲ್ಲಿನ ಗಾಲ್ಫ್ ಮೈದಾನದಲ್ಲಿ ಅವಿತ ಚಿರತೆ ಇದೂವರೆಗೂ ಸೆರೆ ಸಿಕ್ಕಿಲ್ಲ. ಈ ಕಾಡಿನ ಅತಿಥಿಯ ಕುರಿತಾದ ಹಲವು ಮಿಮ್ಗಳು, ತಮಾಷೆ ಪೋಸ್ಟರ್ಗಳು, ಅರಣ್ಯ ಇಲಾಖೆಯನ್ನು ಲೇವಡಿ ಮಾಡುವಂಥ ವಿಡಿಯೊ ತುಣುಕುಗಳು ಹರಿದಾಡುತ್ತಲೇ ಇವೆ. ಈಗ ಗಣಪನ ಜತೆಗೆ ಚಿರತೆಯ ಗೊಂಬೆ ಪೂಜೆ ಮಾಡಿದ ಕುಟುಂಬ ಗಮನ ಸೆಳೆದಿದೆ.