<p><strong>ಬೆಳಗಾವಿ: </strong>ಇಲ್ಲಿನ ವಿಶ್ವೇಶ್ವರಯ್ಯ ನಗರದ ಕಾರ್ತಿಕ್ ಶಿವಾಜಿ ಪೋಲೆಣ್ಣವರ ಎನ್ನುವವರ ಮನೆಯಲ್ಲಿ ಗಣೇಶನ ಮೂರ್ತಿಯ ಜತೆಗೆ ಚಿರತೆ ಗೊಂಬೆಯನ್ನೂ ಪೂಜಿಸುತ್ತಿದ್ದಾರೆ. ಈ ಮೂಲಕ ಚಿರತೆ ಸೆರೆ ಹಿಡಿಯಲಾಗದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಟೀಕಿಸಿದ್ದಾರೆ.</p>.<p>ಕಳೆದ ಒಂದು ತಿಂಗಳಿಂದ ಇಲ್ಲಿನ ಗಾಲ್ಫ್ ಮೈದಾನದಲ್ಲಿ ಅವಿತ ಚಿರತೆ ಇದೂವರೆಗೂ ಸೆರೆ ಸಿಕ್ಕಿಲ್ಲ. ಈ ಕಾಡಿನ ಅತಿಥಿಯ ಕುರಿತಾದ ಹಲವು ಮಿಮ್ಗಳು, ತಮಾಷೆ ಪೋಸ್ಟರ್ಗಳು, ಅರಣ್ಯ ಇಲಾಖೆಯನ್ನು ಲೇವಡಿ ಮಾಡುವಂಥ ವಿಡಿಯೊ ತುಣುಕುಗಳು ಹರಿದಾಡುತ್ತಲೇ ಇವೆ. ಈಗ ಗಣಪನ ಜತೆಗೆ ಚಿರತೆಯ ಗೊಂಬೆ ಪೂಜೆ ಮಾಡಿದ ಕುಟುಂಬ ಗಮನ ಸೆಳೆದಿದೆ.</p>.<p>‘ಗಣೇಶನ ದರ್ಶನಕ್ಕೆ ಕಾಡಿನಿಂದ ನಾಡಿಗೆ ಬಂದಿರುವ ಚಿರತೆಗೆ ಆಟ; ಅರಣ್ಯ ಇಲಾಖೆ ಸಿಬ್ಬಂದಿಗೆ ಪರದಾಟ’ ಎಂಬ ಫಲಕವನ್ನೂ ಚಿರತೆ ಮುಂದೆ ಹಾಕಿದ್ದಾರೆ.</p>.<p>ಏತನ್ಮಧ್ಯೆ, ಶನಿವಾರ ಕೂಡ ಕಾರ್ಯಾಚಣೆಗೆ ಹೋದ ಎರಡು ಆನೆಗಳು ಹಾಗೂ ಸಿಬ್ಬಂದಿ ‘ಹೋದ ದಾರಿಗೆ ಸುಂಕವಿಲ್ಲ’ ಎಂದು ಮರಳಿದಂತಾಗಿದೆ.</p>.<p>ಹಗಲಿನಲ್ಲಿ 40, ರಾತ್ರಿ ಪಾಳಿಯಲ್ಲಿ 18 ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಒಂದು ವಾರದಿಂದ ಚಿರತೆಯ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ಇಲ್ಲಿನ ವಿಶ್ವೇಶ್ವರಯ್ಯ ನಗರದ ಕಾರ್ತಿಕ್ ಶಿವಾಜಿ ಪೋಲೆಣ್ಣವರ ಎನ್ನುವವರ ಮನೆಯಲ್ಲಿ ಗಣೇಶನ ಮೂರ್ತಿಯ ಜತೆಗೆ ಚಿರತೆ ಗೊಂಬೆಯನ್ನೂ ಪೂಜಿಸುತ್ತಿದ್ದಾರೆ. ಈ ಮೂಲಕ ಚಿರತೆ ಸೆರೆ ಹಿಡಿಯಲಾಗದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಟೀಕಿಸಿದ್ದಾರೆ.</p>.<p>ಕಳೆದ ಒಂದು ತಿಂಗಳಿಂದ ಇಲ್ಲಿನ ಗಾಲ್ಫ್ ಮೈದಾನದಲ್ಲಿ ಅವಿತ ಚಿರತೆ ಇದೂವರೆಗೂ ಸೆರೆ ಸಿಕ್ಕಿಲ್ಲ. ಈ ಕಾಡಿನ ಅತಿಥಿಯ ಕುರಿತಾದ ಹಲವು ಮಿಮ್ಗಳು, ತಮಾಷೆ ಪೋಸ್ಟರ್ಗಳು, ಅರಣ್ಯ ಇಲಾಖೆಯನ್ನು ಲೇವಡಿ ಮಾಡುವಂಥ ವಿಡಿಯೊ ತುಣುಕುಗಳು ಹರಿದಾಡುತ್ತಲೇ ಇವೆ. ಈಗ ಗಣಪನ ಜತೆಗೆ ಚಿರತೆಯ ಗೊಂಬೆ ಪೂಜೆ ಮಾಡಿದ ಕುಟುಂಬ ಗಮನ ಸೆಳೆದಿದೆ.</p>.<p>‘ಗಣೇಶನ ದರ್ಶನಕ್ಕೆ ಕಾಡಿನಿಂದ ನಾಡಿಗೆ ಬಂದಿರುವ ಚಿರತೆಗೆ ಆಟ; ಅರಣ್ಯ ಇಲಾಖೆ ಸಿಬ್ಬಂದಿಗೆ ಪರದಾಟ’ ಎಂಬ ಫಲಕವನ್ನೂ ಚಿರತೆ ಮುಂದೆ ಹಾಕಿದ್ದಾರೆ.</p>.<p>ಏತನ್ಮಧ್ಯೆ, ಶನಿವಾರ ಕೂಡ ಕಾರ್ಯಾಚಣೆಗೆ ಹೋದ ಎರಡು ಆನೆಗಳು ಹಾಗೂ ಸಿಬ್ಬಂದಿ ‘ಹೋದ ದಾರಿಗೆ ಸುಂಕವಿಲ್ಲ’ ಎಂದು ಮರಳಿದಂತಾಗಿದೆ.</p>.<p>ಹಗಲಿನಲ್ಲಿ 40, ರಾತ್ರಿ ಪಾಳಿಯಲ್ಲಿ 18 ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಒಂದು ವಾರದಿಂದ ಚಿರತೆಯ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>