<p><strong>ರಾಮದುರ್ಗ:</strong> 2009ರ ಸೆಪ್ಟೆಂಬರ್ನಲ್ಲಿ ರಾಜ್ಯದೆಲ್ಲೆಡೆ ಸುರಿದ ಕುಂಭದ್ರೋಣ ಮಳೆಗೆ ನದಿ ಪಕ್ಕದ ಜನರು ಮನೆ-ಮಠ ಕಳೆದುಕೊಂಡರು. ಮಲಪ್ರಭೆಯ ಒಡಲು ತುಂಬಿ ಪ್ರವಾಹ ಉಂಟಾಗಿ ಅನೇಕರು ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾದರು.<br /> <br /> ನೆರೆಸಂತ್ರಸ್ತರಿಗಾಗಿ ಆಗಿನ ಬಿಜೆಪಿ ಸರ್ಕಾರ `ಆಸರೆ' ಯೋಜನೆಯಡಿ ಮನೆ ನಿರ್ಮಿಸಲು ಮುಂದಾಯಿತು. ರಾಮದುರ್ಗ ತಾಲ್ಲೂಕಿನ ವಿವಿಧ ಕಡೆಗಳಲ್ಲಿ `ಆಸರೆ' ಮನೆಗಳ ನಿರ್ಮಾಣ ಕಾರ್ಯ ಸಹ ನಡೆಯಿತು.<br /> <br /> ಅಂಥದರಲ್ಲಿ ತಾಲ್ಲೂಕಿನ ಸುನ್ನಾಳ ಗ್ರಾಮವೂ ಒಂದು. ಸುನ್ನಾಳ ಗ್ರಾಮದಿಂದ ಸುಮಾರು 2 ಕಿ.ಮೀ. ದೂರದ ಎತ್ತರದ ಪ್ರದೇಶದಲ್ಲಿ ಅಂದಿನ ಬಿಜೆಪಿ ಸರ್ಕಾರ ಸುಮಾರು 213 ಮನೆಗಳನ್ನು ನಿರ್ಮಿಸಿತು. ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ನವೆಂಬರ್ 6, 2011ರಂದು ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ತರಾತುರಿಯಲ್ಲಿ ಕೆಲವು ಫಲಾನುಭವಿಗಳನ್ನು ಕರೆಯಿಸಿ ಹಕ್ಕುಪತ್ರ ವಿತರಿಸಿದರು.<br /> <br /> ಆದರೆ ಕನಿಷ್ಠ ಮೌಲಸೌಕರ್ಯದಿಂದ ವಂಚಿತವಾಗಿರುವ ಈ ಮನೆಗಳಲ್ಲಿ ಫಲಾನುಭವಿಗಳು ವಾಸ ಮಾಡುತ್ತಿಲ್ಲ. ಅವು ಈಗ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.<br /> <br /> `ಮನೆಗಳಿಗೆ ಶೌಚಾಲಯದ ವ್ಯವಸ್ಥೆಯಿಲ್ಲ. ಹಕ್ಕುಪತ್ರ ನೀಡಿಲ್ಲ. ಬೀದಿ ದೀಪಗಳಿಲ್ಲ, ರಸ್ತೆಯೂ ಇಲ್ಲ. ಮನೆಗಳ ಕಿಟಕಿ ಬಾಗಿಲು ಕಿತ್ತು ಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ಫಲಾನುಭವಿಗಳು ಹೇಗೆ ಜೀವಿಸಬೇಕು' ಎನ್ನುತ್ತಾರೆ ಫಲಾನುಭವಿ ಜಾವೀದ್ ಅಹ್ಮದ್ ಉಸ್ತಾದ್.<br /> <br /> `ಆಸರೆ' ಯೋಜನೆಯಡಿ ನಿರ್ಮಿಸಿದ ಮನೆಗಳು ತೀರ ಕಳಪೆ ಮಟ್ಟದಲ್ಲಿವೆ. ನಿರ್ಮಾಣದ ಹಂತದಲ್ಲಿಯೂ ವಿರೋಧ ವ್ಯಕ್ತಪಡಿಸಿದರೂ ಪ್ರಯೋಜನವಾಗಲಿಲ್ಲ. ಅಗತ್ಯ ಸೌಲಭ್ಯಗಳನ್ನು ಮನೆಗಳಲ್ಲಿ ನಿರ್ಮಿಸಿಲ್ಲ. ಅಂತಹ ಮನೆಗಳನ್ನು ಹಸ್ತಾಂತರಿಸಿಕೊಳ್ಳುವುದು ಫಲಾನುಭವಿಗಳಿಗೆ ಬೇಡವಾಗಿದೆ. ಹೀಗಾಗಿ ಮನೆಗಳನ್ನು ಹಸ್ತಾಂತರಿಸಿಕೊಂಡಿಲ್ಲ' ಎಂದು ಗ್ರಾಮ ಪಂಚಾಯ್ತಿ ಸಿಬ್ಬಂದಿಯೊಬ್ಬರು ತಿಳಿಸಿದರು.<br /> <br /> `ಸರ್ಕಾರದ ಹಣದಲ್ಲಿ ನಿರಾಶ್ರಿತರಿಗಾಗಿ ಒಟ್ಟು 213 ಮನೆಗಳನ್ನು ನಿರ್ಮಿಸಿದ್ದರೂ, ನೀರು, ವಿದ್ಯುತ್, ರಸ್ತೆಗಳಂಥ ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿವೆ. ಬಿಜೆಪಿ ಸರ್ಕಾರ ತರಾತುರಿಯಲ್ಲಿ ಮನೆಗಳನ್ನು ನಿರ್ಮಿಸಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದೆ' ಎಂದು ಮಾಜಿ ಶಾಸಕ ಎನ್. ವಿ. ಪಾಟೀಲ ಆರೋಪಿದ್ದಾರೆ.<br /> <br /> `ಮನೆಗಳ ಸುತ್ತಮುತ್ತ ಮುಳ್ಳುಕಂಟಿಗಳು ಬೆಳೆದು ವಿಷಜಂತುಗಳ ತಾಣವಾಗಿದೆ. ಕಿಟಕಿ ಬಾಗಿಲುಗಳು ಕಿತ್ತು ಹೋಗಿವೆ. ಶೌಚಾಲಯಕ್ಕೆ ಪರಿಕರಗಳ ಜೋಡಣೆ ಇಲ್ಲದೇ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಿ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಬೇಕು' ಎಂದು ಒತ್ತಾಯಿಸಿದರು.<br /> <br /> `ಒಂದು ವರ್ಷದ ಹಿಂದೆ ಆಸರೆ ಮನೆಗಳನ್ನು ಆಯಾ ಗ್ರಾಮ ಪಂಚಾಯ್ತಿಗಳಿಗೆ ಹಸ್ತಾಂತರ ಮಾಡಲಾಗಿದೆ. ಅಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಫಲಾನುಭವಿಗಳಿಗೆ ವಿತರಿಸಬೇಕಿರುವುದು ಗ್ರಾಮ ಪಂಚಾಯ್ತಿ' ಎಂದು ಭೂ ಸೇನಾ ನಿಗಮದ ಉಪ ನಿರ್ದೇಶಕ ಝಡ್.ಎಂ. ಚಿಂಚೋಳಿಕರ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮದುರ್ಗ:</strong> 2009ರ ಸೆಪ್ಟೆಂಬರ್ನಲ್ಲಿ ರಾಜ್ಯದೆಲ್ಲೆಡೆ ಸುರಿದ ಕುಂಭದ್ರೋಣ ಮಳೆಗೆ ನದಿ ಪಕ್ಕದ ಜನರು ಮನೆ-ಮಠ ಕಳೆದುಕೊಂಡರು. ಮಲಪ್ರಭೆಯ ಒಡಲು ತುಂಬಿ ಪ್ರವಾಹ ಉಂಟಾಗಿ ಅನೇಕರು ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾದರು.<br /> <br /> ನೆರೆಸಂತ್ರಸ್ತರಿಗಾಗಿ ಆಗಿನ ಬಿಜೆಪಿ ಸರ್ಕಾರ `ಆಸರೆ' ಯೋಜನೆಯಡಿ ಮನೆ ನಿರ್ಮಿಸಲು ಮುಂದಾಯಿತು. ರಾಮದುರ್ಗ ತಾಲ್ಲೂಕಿನ ವಿವಿಧ ಕಡೆಗಳಲ್ಲಿ `ಆಸರೆ' ಮನೆಗಳ ನಿರ್ಮಾಣ ಕಾರ್ಯ ಸಹ ನಡೆಯಿತು.<br /> <br /> ಅಂಥದರಲ್ಲಿ ತಾಲ್ಲೂಕಿನ ಸುನ್ನಾಳ ಗ್ರಾಮವೂ ಒಂದು. ಸುನ್ನಾಳ ಗ್ರಾಮದಿಂದ ಸುಮಾರು 2 ಕಿ.ಮೀ. ದೂರದ ಎತ್ತರದ ಪ್ರದೇಶದಲ್ಲಿ ಅಂದಿನ ಬಿಜೆಪಿ ಸರ್ಕಾರ ಸುಮಾರು 213 ಮನೆಗಳನ್ನು ನಿರ್ಮಿಸಿತು. ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ನವೆಂಬರ್ 6, 2011ರಂದು ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ತರಾತುರಿಯಲ್ಲಿ ಕೆಲವು ಫಲಾನುಭವಿಗಳನ್ನು ಕರೆಯಿಸಿ ಹಕ್ಕುಪತ್ರ ವಿತರಿಸಿದರು.<br /> <br /> ಆದರೆ ಕನಿಷ್ಠ ಮೌಲಸೌಕರ್ಯದಿಂದ ವಂಚಿತವಾಗಿರುವ ಈ ಮನೆಗಳಲ್ಲಿ ಫಲಾನುಭವಿಗಳು ವಾಸ ಮಾಡುತ್ತಿಲ್ಲ. ಅವು ಈಗ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ.<br /> <br /> `ಮನೆಗಳಿಗೆ ಶೌಚಾಲಯದ ವ್ಯವಸ್ಥೆಯಿಲ್ಲ. ಹಕ್ಕುಪತ್ರ ನೀಡಿಲ್ಲ. ಬೀದಿ ದೀಪಗಳಿಲ್ಲ, ರಸ್ತೆಯೂ ಇಲ್ಲ. ಮನೆಗಳ ಕಿಟಕಿ ಬಾಗಿಲು ಕಿತ್ತು ಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ಫಲಾನುಭವಿಗಳು ಹೇಗೆ ಜೀವಿಸಬೇಕು' ಎನ್ನುತ್ತಾರೆ ಫಲಾನುಭವಿ ಜಾವೀದ್ ಅಹ್ಮದ್ ಉಸ್ತಾದ್.<br /> <br /> `ಆಸರೆ' ಯೋಜನೆಯಡಿ ನಿರ್ಮಿಸಿದ ಮನೆಗಳು ತೀರ ಕಳಪೆ ಮಟ್ಟದಲ್ಲಿವೆ. ನಿರ್ಮಾಣದ ಹಂತದಲ್ಲಿಯೂ ವಿರೋಧ ವ್ಯಕ್ತಪಡಿಸಿದರೂ ಪ್ರಯೋಜನವಾಗಲಿಲ್ಲ. ಅಗತ್ಯ ಸೌಲಭ್ಯಗಳನ್ನು ಮನೆಗಳಲ್ಲಿ ನಿರ್ಮಿಸಿಲ್ಲ. ಅಂತಹ ಮನೆಗಳನ್ನು ಹಸ್ತಾಂತರಿಸಿಕೊಳ್ಳುವುದು ಫಲಾನುಭವಿಗಳಿಗೆ ಬೇಡವಾಗಿದೆ. ಹೀಗಾಗಿ ಮನೆಗಳನ್ನು ಹಸ್ತಾಂತರಿಸಿಕೊಂಡಿಲ್ಲ' ಎಂದು ಗ್ರಾಮ ಪಂಚಾಯ್ತಿ ಸಿಬ್ಬಂದಿಯೊಬ್ಬರು ತಿಳಿಸಿದರು.<br /> <br /> `ಸರ್ಕಾರದ ಹಣದಲ್ಲಿ ನಿರಾಶ್ರಿತರಿಗಾಗಿ ಒಟ್ಟು 213 ಮನೆಗಳನ್ನು ನಿರ್ಮಿಸಿದ್ದರೂ, ನೀರು, ವಿದ್ಯುತ್, ರಸ್ತೆಗಳಂಥ ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿವೆ. ಬಿಜೆಪಿ ಸರ್ಕಾರ ತರಾತುರಿಯಲ್ಲಿ ಮನೆಗಳನ್ನು ನಿರ್ಮಿಸಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದೆ' ಎಂದು ಮಾಜಿ ಶಾಸಕ ಎನ್. ವಿ. ಪಾಟೀಲ ಆರೋಪಿದ್ದಾರೆ.<br /> <br /> `ಮನೆಗಳ ಸುತ್ತಮುತ್ತ ಮುಳ್ಳುಕಂಟಿಗಳು ಬೆಳೆದು ವಿಷಜಂತುಗಳ ತಾಣವಾಗಿದೆ. ಕಿಟಕಿ ಬಾಗಿಲುಗಳು ಕಿತ್ತು ಹೋಗಿವೆ. ಶೌಚಾಲಯಕ್ಕೆ ಪರಿಕರಗಳ ಜೋಡಣೆ ಇಲ್ಲದೇ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಿ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಬೇಕು' ಎಂದು ಒತ್ತಾಯಿಸಿದರು.<br /> <br /> `ಒಂದು ವರ್ಷದ ಹಿಂದೆ ಆಸರೆ ಮನೆಗಳನ್ನು ಆಯಾ ಗ್ರಾಮ ಪಂಚಾಯ್ತಿಗಳಿಗೆ ಹಸ್ತಾಂತರ ಮಾಡಲಾಗಿದೆ. ಅಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಫಲಾನುಭವಿಗಳಿಗೆ ವಿತರಿಸಬೇಕಿರುವುದು ಗ್ರಾಮ ಪಂಚಾಯ್ತಿ' ಎಂದು ಭೂ ಸೇನಾ ನಿಗಮದ ಉಪ ನಿರ್ದೇಶಕ ಝಡ್.ಎಂ. ಚಿಂಚೋಳಿಕರ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>