ಬಡೇಲಡಕು ಗ್ರಾಮದಬಸವರಾಜ ಎಂಬುವವರ ಮೆನೆ ಮೇಲೆ ಗಾಂಜಾ ಇದೆ ಎಂಬ ಮಾಹಿತಿ ಮೇರೆಗೆ ಕೂಡ್ಲಿಗಿ ಪೊಲೀಸರು ಜನವರಿ28ರಂದು ಕಾರ್ಯಾಚರಣೆ ನಡೆಸಿ ಗಾಂಜಾ ವಶಪಡಿಸಿಕೊಂಡು, ಅತನನ್ನು ಠಾಣೆಗೆ ಕರೆ ತಂದು ವಿಚಾರಣೆ ಮಾಡಿದ್ದರು. ಆದರೆ ಇದರಲ್ಲಿ ಬಸವರಾಜ ಅವರ ಪಾತ್ರ ಏನಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮಾಹಿತಿ ನೀಡಿದವರನ್ನು ಬಂಧಿಸಿ ವಿಚಾರಣೆ ಮಾಡುವಂತೆ ಒತ್ತಾಯಿಸಿದ್ದರು.