<p><strong>ಹೊಸಪೇಟೆ: </strong>ಶುಭ ಧನಲಕ್ಷ್ಮಿ ಸಹಕಾರಿಯ ಹಣ ದುರುಪಯೋಗ ಪಡಿಸಿಕೊಂಡಿದ್ದ ಅದರ ಮಾಜಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ ಶೆಟ್ಟಿ ಅವರ ಸ್ಥಿರ ಮತ್ತು ಚರ ಆಸ್ತಿಯನ್ನು ಶುಕ್ರವಾರ ನಗರದಲ್ಲಿ ವಶಕ್ಕೆ ಪಡೆಯಲಾಯಿತು.</p>.<p>2014ರಲ್ಲಿ ಸಹಕಾರಿ ಸಿ.ಇ.ಒ. ಆಗಿದ್ದ ಶಿವಪ್ರಕಾಶ ಶೆಟ್ಟಿ ಅವರು ₹7,70,810 ದುರುಪಯೋಗ ಪಡಿಸಿಕೊಂಡಿದ್ದರು. ಈ ಕುರಿತು ಸಹಕಾರಿಯಿಂದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘಗಳ ಉಪನಿಬಂಧಕರ ದಾವಾ ಪಂಚಾಯಿತಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.</p>.<p>ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಬಡ್ಡಿ ಸಮೇತ ₹16,50,360 ಅವರಿಂದ ಪಡೆಯಬೇಕು. ಒಂದುವೇಳೆ ಹಣ ಭರಿಸಲು ಆಗದಿದ್ದರೆ ಅವರ ಚರ ಮತ್ತು ಸ್ಥಿರಾಸ್ತಿ ವಶಪಡಿಸಿಕೊಳ್ಳುವಂತೆ ಆದೇಶ ಹೊರಡಿಸಿತ್ತು.</p>.<p>ಅದರ ಪ್ರಕಾರ ಶುಭ ಧನಲಕ್ಷ್ಮಿ ಸೌಹಾರ್ದ ವಿವಿದೋದ್ದೇಶ ಸಹಕಾರಿ ಮಾರಾಟ ಅಧಿಕಾರಿ ಜಿ. ಓಬಳಾಪತಿ, ಹಾಲಿ ಸಿ.ಇ.ಒ. ಮಲ್ಲಿಕಾರ್ಜುನಗೌಡ, ನಿರ್ದೇಶಕ ಗೋವರ್ಧನ ಶೆಟ್ಟಿ, ವಕೀಲ ಜನಾದ್ರಿ ವೆಂಕೋಬಯ್ಯ ಶೆಟ್ಟಿ ಸಮ್ಮುಖದಲ್ಲಿ ಅವರ ಆಸ್ತಿ ಲೆಕ್ಕ ಹಾಕಿ ವಶಕ್ಕೆ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ: </strong>ಶುಭ ಧನಲಕ್ಷ್ಮಿ ಸಹಕಾರಿಯ ಹಣ ದುರುಪಯೋಗ ಪಡಿಸಿಕೊಂಡಿದ್ದ ಅದರ ಮಾಜಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ ಶೆಟ್ಟಿ ಅವರ ಸ್ಥಿರ ಮತ್ತು ಚರ ಆಸ್ತಿಯನ್ನು ಶುಕ್ರವಾರ ನಗರದಲ್ಲಿ ವಶಕ್ಕೆ ಪಡೆಯಲಾಯಿತು.</p>.<p>2014ರಲ್ಲಿ ಸಹಕಾರಿ ಸಿ.ಇ.ಒ. ಆಗಿದ್ದ ಶಿವಪ್ರಕಾಶ ಶೆಟ್ಟಿ ಅವರು ₹7,70,810 ದುರುಪಯೋಗ ಪಡಿಸಿಕೊಂಡಿದ್ದರು. ಈ ಕುರಿತು ಸಹಕಾರಿಯಿಂದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘಗಳ ಉಪನಿಬಂಧಕರ ದಾವಾ ಪಂಚಾಯಿತಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.</p>.<p>ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಬಡ್ಡಿ ಸಮೇತ ₹16,50,360 ಅವರಿಂದ ಪಡೆಯಬೇಕು. ಒಂದುವೇಳೆ ಹಣ ಭರಿಸಲು ಆಗದಿದ್ದರೆ ಅವರ ಚರ ಮತ್ತು ಸ್ಥಿರಾಸ್ತಿ ವಶಪಡಿಸಿಕೊಳ್ಳುವಂತೆ ಆದೇಶ ಹೊರಡಿಸಿತ್ತು.</p>.<p>ಅದರ ಪ್ರಕಾರ ಶುಭ ಧನಲಕ್ಷ್ಮಿ ಸೌಹಾರ್ದ ವಿವಿದೋದ್ದೇಶ ಸಹಕಾರಿ ಮಾರಾಟ ಅಧಿಕಾರಿ ಜಿ. ಓಬಳಾಪತಿ, ಹಾಲಿ ಸಿ.ಇ.ಒ. ಮಲ್ಲಿಕಾರ್ಜುನಗೌಡ, ನಿರ್ದೇಶಕ ಗೋವರ್ಧನ ಶೆಟ್ಟಿ, ವಕೀಲ ಜನಾದ್ರಿ ವೆಂಕೋಬಯ್ಯ ಶೆಟ್ಟಿ ಸಮ್ಮುಖದಲ್ಲಿ ಅವರ ಆಸ್ತಿ ಲೆಕ್ಕ ಹಾಕಿ ವಶಕ್ಕೆ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>