ಲಾಕ್ಡೌನ್ನಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದೇ ಸಮಯ ಬಳಸಿಕೊಂಡು ಬಸ್ಗಳ ದುರಸ್ತಿ, ಅಳಿಸಿ ಹೋಗಿರುವ ನಾಮಫಲಕಗಳಿಗೆ ಹೊಸದಾಗಿ ಹೆಸರು ಬರೆಯಲಾಗುತ್ತಿದೆ. ಆವರಣವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಬಸ್ ನಿಲ್ದಾಣ ಮತ್ತು ಡಿಪೊ ಕಚೇರಿ ನವೀಕರಣ ಮಾಡಲಾಗುತ್ತಿದೆ. ಇದರೊಂದಿಗೆ ಗೋಡೆಗಳ ಮೇಲೆ ಕೊರೊನಾ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲು ಚಿತ್ರ ಬಿಡಿಸಲಾಗುತ್ತಿದೆ.