ಹೊಸಪೇಟೆ: ಗೋಡೆ ಚಿತ್ರಗಳ ಮೂಲಕ ಕೊರೊನಾ ಸೋಂಕು ಹರಡದಂತೆ ಜಾಗೃತಿ ಮೂಡಿಸುವ ಕೆಲಸ ಇಲ್ಲಿನ ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ ಅವರು ವಿಶೇಷ ಮುತುವರ್ಜಿ ವಹಿಸಿ ಮಾಡಿಸುತ್ತಿದ್ದಾರೆ.
‘ಗ್ರೀನ್ ಹೊಸಪೇಟೆ’ ಮತ್ತು ‘ವಿಶ್ವ ಚಿತ್ರಕಾಲ’ ಸಂಸ್ಥೆಯ ಕಲಾವಿದರ ನೆರವಿನೊಂದಿಗೆ ಈ ಕೆಲಸ ನಡೆಯುತ್ತಿದೆ. ನಗರಸಭೆ ಕಚೇರಿ ಸೇರಿದಂತೆ ಅದಕ್ಕೆ ಸೇರಿದ ಕಟ್ಟಡಗಳು, ಕಾಂಪೌಂಡ್ ಮೇಲೆ ಕೊರೊನಾ ಸೋಂಕು ತಗುಲದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಬಳಕೆ, ಸ್ಯಾನಿಟೈಸರ್ ಬಳಕೆ ಬಗ್ಗೆ ಚಿತ್ರಗಳನ್ನು ಬಿಡಿಸಲಾಗುತ್ತಿದೆ.