ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಕೋವಿಡ್–19: ‘ಸುರಕ್ಷತೆ, ಎಚ್ಚರ ಎರಡೂ ಅಗತ್ಯ’

Last Updated 6 ಜುಲೈ 2020, 8:44 IST
ಅಕ್ಷರ ಗಾತ್ರ

ಹೊಸಪೇಟೆ: ‘ಕೊರೊನಾ ಸೋಂಕು ಹರಡದಂತೆ ತಡೆಯಬೇಕಾದರೆ ಸಾರ್ವಜನಿಕರು ಸುರಕ್ಷತೆ ಮತ್ತು ಎಚ್ಚರಿಕೆಯಿಂದ ಇರಬೇಕು’ ಎಂದು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಕೋವಿಡ್‌–19 ಸಂಬಂಧಿಸಿದ ಸಭೆಯಲ್ಲಿ ಆರೋಗ್ಯ ಮತ್ತು ಪೊಲೀಸ್‌ ಇಲಾಖೆಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹೊಸಪೇಟೆಯಲ್ಲಿ 170ಕ್ಕೂ ಹೆಚ್ಚಿನ ಜನರಿಗೆ ಸೋಂಕು ಕಾಣಿಸಿಕೊಂಡಿದೆ. ದಿನಕ್ಕೆ 30 ರಿಂದ 40 ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಸಾರ್ವಜನಿಕರು ಹೆಚ್ಚಿನ ಕಾಳಜಿ ವಹಿಸಿ ಎಚ್ಚರದಿಂದ ಇರಬೇಕು’ ಎಂದು ಹೇಳಿದ್ದಾರೆ.

‘ನಗರಕ್ಕೆ ಅನ್ಯ ಜಿಲ್ಲೆಯ ಜೊತೆಗೆ ಸೋಂಕಿತ ಪ್ರದೇಶಗಳಿಂದಲೂ ಜನ ಬರುತ್ತಿದ್ದಾರೆ. ಸಾರ್ವಜನಿಕರು ಅನವಶ್ಯಕವಾಗಿ ಹೊರಗೆ ಬರಬಾರದು, ಚಿಕ್ಕಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಹೊರಗಡೆ ಕಳಿಸಬಾರದು. ತರಕಾರಿ ವ್ಯಾಪಾರಕ್ಕೆಂದು ವಿವಿಧ ಭಾಗದಿಂದ ವ್ಯಾಪರಸ್ಥರು ಸಹ ಬರುತ್ತಿದ್ದು, ತರಕಾರಿ ಕೊಳ್ಳಲು ಪ್ರತಿ ಮನೆಯಿಂದ ಒಬ್ಬ ವ್ಯಕ್ತಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಕೊಳ್ಳಬೇಕು’ ಎಂದರು.

‘ಕಂಟೈನ್ ಮೆಂಟ್ ಹಾಗೂ ಬಫರ್ ವಲಯಗಳಲ್ಲಿ ಕ್ವಾರಂಟೈನ್ ಒಳಪಟ್ಟ ರೋಗಿಗಳು ಹಾಗೂ ಪ್ರಥಮ ಸೋಂಕಿತರು ಓಡಾಡುವ ಕುರಿತು ಮಾಹಿತಿ ಸಿಗುತ್ತಿದೆ. ಕ್ವಾರಂಟೈನ್ ಅವಧಿ ಮುಗಿದು ತಪಾಸಣೆ ಪೂರ್ಣಗೊಳ್ಳುವವರೆಗೂ ಹೊರಗಡೆ ಬರಬಾರದು. ಜಿಲ್ಲೆಯ ಹೆಚ್ಚು ಸೋಂಕಿತ ವಲಯಗಳಿಂದ ಜನರು ತಾಲ್ಲೂಕಿಗೆ ಬರುತ್ತಿದ್ದಾರೆ. ಈ ಬಗ್ಗೆ ಜನರು ಗಾಬರಿಗೊಳ್ಳುವ ಅವಶ್ಯಕತೆಯಿಲ್ಲ. ಅಂತರ ಕಾಯ್ದುಕೊಂಡು ಅಗತ್ಯ ಕಾರ್ಯಗಳಿದ್ದಲ್ಲಿ ಮಾತ್ರ ಹೊರಬರಬೇಕು. ವಿನಾ ಕಾರಣ ಮನೆಯಿಂದ ಹೊರಬರಬೇಡಿ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು’ ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT