‘ಮಾರ್ಚ್ನಲ್ಲಿ ಹಂಪಿ ಉತ್ಸವದಲ್ಲಿ ಸಂದರ್ಭದಲ್ಲಿ ಬಂದಿದ್ದ ಈ ಅಲೆಮಾರಿ ಕುಟುಂಬಗಳು ಜಿಲ್ಲೆಯಾದ್ಯಂತ ಓಡಾಡಿ ಒಂಟೆ ಆಡಿಸುತ್ತ ಬದುಕು ನಡೆಸುತ್ತಿದ್ದಾರೆ. ಗುರುವಾರ ಟಿ.ಬಿ. ಡ್ಯಾಂ ಕಾಲೇಜು ಮೈದಾನದಲ್ಲಿ ಬೀಡು ಬಿಟ್ಟಿದ್ದಾಗ ಅವರನ್ನು ಕಂಡು ಪೊಲೀಸರು ವಶಕ್ಕೆ ಪಡೆದು, ವಾಜಪೇಯಿ ಉದ್ಯಾನದಲ್ಲಿ ಇರಿಸಿದ್ದಾರೆ. ಅವರು ಯಾವುದೇ ಅಪರಾಧ ಮಾಡಿಲ್ಲ. ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಗೌರವ ಅಧ್ಯಕ್ಷ ಕೆ.ಎಂ. ಮೇತ್ರಿ, ಗುಡಾರ ಗುಡಿಸಲು ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷ ಸಣ್ಣ ಮಾರೆಪ್ಪ ಆಗ್ರಹಿಸಿದ್ದಾರೆ.