<p><strong>ಹೊಸಪೇಟೆ: </strong>ಕಂಪ್ಲಿ ತಾಲ್ಲೂಕಿನ ದೇವಸಮುದ್ರದ 200 ಎಕರೆ ರೈತರ ಇನಾಂ ಜಮೀನಿನ ಪಟ್ಟ ಮಾಡಿಕೊಡಬೇಕೆಂದು ತುಂಗಭದ್ರಾ ರೈತ ಸಂಘ ಆಗ್ರಹಿಸಿದೆ.</p>.<p>ಈ ಸಂಬಂಧ ಸಂಘದ ಜಿಲ್ಲಾ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಅವರು ಗುರುವಾರ ನಗರದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.</p>.<p>‘ಗ್ರಾಮದ ಒಟ್ಟು 6,000 ಎಕರೆ ಇನಾಂ ಜಮೀನಿನ ಪೈಕಿ 5,800 ಎಕರೆ ಜಮೀನಿನ ಪಟ್ಟಾ ರೈತರಿಗೆ ನೀಡಲಾಗಿದೆ. ಇನ್ನುಳಿದ 200 ಎಕರೆ ಜಮೀನಿನ ಪಟ್ಟಾ ಕೊಟ್ಟಿಲ್ಲ. ರೈತರಿಗೆ ಆದಷ್ಟು ಶೀಘ್ರ ಪಟ್ಟಾ ಕೊಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.</p>.<p>‘ಗ್ರಾಮೀಣ ಭಾಗದ ರೈತರ ತುಂಡು ಜಮೀನುಗಳ ನೋಂದಣಿಯಾಗದ ಕಾರಣ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನಿಗೆ ತಿದ್ದುಪಡಿ ಮಾಡಿ ಅದನ್ನು ಸರಳಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.</p>.<p>ಸಂಘದ ಮುಖಂಡರಾದ ಕುರುಬರ ಲಿಂಗರಾಜ, ದೇವಸಮುದ್ರದ ರೈತರಾದ ಕುರುಬರ ನಾಗೇಂದ್ರಪ್ಪ, ಎಂ. ಮೃತ್ಯುಂಜಯ ಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ: </strong>ಕಂಪ್ಲಿ ತಾಲ್ಲೂಕಿನ ದೇವಸಮುದ್ರದ 200 ಎಕರೆ ರೈತರ ಇನಾಂ ಜಮೀನಿನ ಪಟ್ಟ ಮಾಡಿಕೊಡಬೇಕೆಂದು ತುಂಗಭದ್ರಾ ರೈತ ಸಂಘ ಆಗ್ರಹಿಸಿದೆ.</p>.<p>ಈ ಸಂಬಂಧ ಸಂಘದ ಜಿಲ್ಲಾ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಅವರು ಗುರುವಾರ ನಗರದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.</p>.<p>‘ಗ್ರಾಮದ ಒಟ್ಟು 6,000 ಎಕರೆ ಇನಾಂ ಜಮೀನಿನ ಪೈಕಿ 5,800 ಎಕರೆ ಜಮೀನಿನ ಪಟ್ಟಾ ರೈತರಿಗೆ ನೀಡಲಾಗಿದೆ. ಇನ್ನುಳಿದ 200 ಎಕರೆ ಜಮೀನಿನ ಪಟ್ಟಾ ಕೊಟ್ಟಿಲ್ಲ. ರೈತರಿಗೆ ಆದಷ್ಟು ಶೀಘ್ರ ಪಟ್ಟಾ ಕೊಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.</p>.<p>‘ಗ್ರಾಮೀಣ ಭಾಗದ ರೈತರ ತುಂಡು ಜಮೀನುಗಳ ನೋಂದಣಿಯಾಗದ ಕಾರಣ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನಿಗೆ ತಿದ್ದುಪಡಿ ಮಾಡಿ ಅದನ್ನು ಸರಳಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.</p>.<p>ಸಂಘದ ಮುಖಂಡರಾದ ಕುರುಬರ ಲಿಂಗರಾಜ, ದೇವಸಮುದ್ರದ ರೈತರಾದ ಕುರುಬರ ನಾಗೇಂದ್ರಪ್ಪ, ಎಂ. ಮೃತ್ಯುಂಜಯ ಸ್ವಾಮಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>