‘ಗ್ರಾಮದಲ್ಲಿ ಅಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಇದರಿಂದಾಗಿಯೇ ವಾರದ ಹಿಂದೆ ಎಂಟು ಜನರಿಗೆ ಡೆಂಗಿ, ಹಲವರಿಗೆ ಟೈಫಾಯ್ಡ್ ಆಗಿತ್ತು. ಯಾರೂ ನೀರು ಸಂಗ್ರಹಿಸಿ ಇಡಬಾರದು. ಕಾಯಿಸಿ, ಆರಿಸಿದ ನೀರು ಕುಡಿಯುವಂತೆ ಸಲಹೆ ಮಾಡಲಾಗಿದೆ. ಗ್ರಾಮದಲ್ಲಿಯೇ ಕ್ಲಿನಿಕ್ ತೆಗೆದು ಎಲ್ಲರ ಪರೀಕ್ಷೆ ನಡೆಸಲಾಗುತ್ತಿದೆ. ಈಗ ಹೊಸದಾಗಿ ಡೆಂಗಿ ಪ್ರಕರಣ ಪತ್ತೆಯಾಗಿಲ್ಲ. ಟೈಫಾಯ್ಡ್ ಪ್ರಕರಣಗಳಲ್ಲಿ ಸಾಕಷ್ಟು ಇಳಿಕೆಯಾಗಿದೆ’ ಎಂದು ಡಾ. ಭಾಸ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.