<p><strong>ಬಳ್ಳಾರಿ: </strong>‘ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸುವ ಪ್ರಸ್ತಾಪವನ್ನು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯು ಬಲವಾಗಿ ವಿರೋಧಿಸುತ್ತದೆ’ ಎಂದು ಸಮಿತಿಯ ಸಂಚಾಲಕ ಎಸ್.ಪನ್ನರಾಜ್ ಪ್ರತಿಪಾದಿಸಿದರು.</p>.<p>'371 (ಜೆ) ವಿಶೇಷ ಮೀಸಲಾತಿ ದೊರಕುತ್ತದೆ ಎಂಬ ಕಾರಣಕ್ಕೆ ಹಿಂದೆ, ಕೊಪ್ಪಳ ಸುತ್ತಮುತ್ತಲಿನ 60 ಊರುಗಳನ್ನು ಆ ಜಿಲ್ಲೆಗೆ ಸೇರಿಸುವ ಪ್ರಯತ್ನ ನಡೆದಿತ್ತು. ಅದರೊಂದಿಗೆ ವಿಜಯಪುರವನ್ನು ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ತರುವ ಪ್ರಯತ್ನವನ್ನೂ ತಡೆಯಲಾಗಿತ್ತು. ಈಗ ಮೊಳಕಾಲ್ಮುರು ಸೇರ್ಪಡೆಗೂ ಸಮಿತಿ ಅವಕಾಶ ಕೊಡುವುದಿಲ್ಲ’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ವಿಶೇಷ ಮೀಸಲಾತಿಯನ್ನು ಪಡೆಯಲು ಬಳ್ಳಾರಿ ಜಿಲ್ಲೆಯು ದೊಡ್ಡ ಹೋರಾಟವನ್ನೇ ಮಾಡಬೇಕಾಯಿತು. ಅಂಥ ಜಿಲ್ಲೆಗೆ ಸೇರಿದ್ದು ವಿಭಜನೆಯ ಬಳಿಕ ಅಸ್ತಿತ್ವಕ್ಕೆ ಬರಲಿರುವ ವಿಜಯನಗರಕ್ಕೂ ಅದನ್ನೂ ಪಡೆಯುವ ಹಕ್ಕಿದೆ. ಆದರೆ ಏಳನೇ ಜಿಲ್ಲೆಯಾಗಿ ಸೇರ್ಪಡೆಯಾಗಿರುವ ಬಗ್ಗೆ ಸಂವಿಧಾನ ತಿದ್ದುಪಡಿಯಾಗಬೇಕು’ ಎಂದು ಆಗ್ರಹಿಸಿದರು.</p>.<p>’ತಿದ್ದುಪಡಿಯಾಗದೇ ಇದ್ದು, ನ್ಯಾಯಾಲಯದಲ್ಲಿ ಯಾರಾದರೂ ಆಕ್ಷೇಪಣೆ ದಾಖಲಿಸಿದರೆ ತಾಂತ್ರಿಕ ಕಾರಣದಿಂದಾಗಿ ಮೀಸಲಾತಿಗೆ ತಾತ್ಕಾಲಿಕ ತಡೆ ಬೀಳುವ ಸಾಧ್ಯತೆ ಹೆಚ್ಚಿದೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ಹೀಗಾಗಿ, ವಿಜಯನಗರ ಜಿಲ್ಲೆ ರಚನೆಯಾದ ಬಳಿಕ ವಿಶೇಷ ಮೀಸಲಾತಿ ಸೌಕರ್ಯ ಎಂದಿನಂತೆ ಮುಂದುವರಿಯುತ್ತದೆಯೇ ಎಂಬ ಬಗ್ಗೆ ರಾಜ್ಯ ಸರ್ಕಾರವು ಸಂವಿಧಾನ ತಜ್ಞರ ವರದಿಯನ್ನು ಪಡೆಯಬೇಕು. ನಂತರ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಬೇಕು. ಈ ವಿಷಯದಲ್ಲಿ ಸರ್ಕಾರ ಬಹಳ ಎಚ್ಚರಿಕೆಯಿಂದ ಮುಂದುವರಿಯಬೇಕು’ ಎಂದು ಆಗ್ರಹಿಸಿದರು.</p>.<p>‘ವಿಜಯನಗರ ಜಿಲ್ಲೆಗೆ ವಿಶೇಷ ಮೀಸಲಾತಿ ತೊಂದರೆಯಾಗದು. ವದಂತಿಗಳಿಗೆ ಕಿವಿ ಕೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ಸಿಂಗ್ ಹೇಳಿಕೆ ನೀಡಿದ್ದಾರೆ. ಆದರೆ, ಕಾನೂನಾತ್ಮಕವಾಗಿ ಸ್ಪಷ್ಟನೆ ನೀಡಿದರೆ ಮಾತ್ರ ಅದನ್ನು ಒಪ್ಪಬಹುದು’ ಎಂದು ಹೇಳಿದರು.</p>.<p><strong>ಗೊಂದಲ:</strong>’ಹೊಸ ಜಿಲ್ಲೆಗೆ ಯಾವ ತಾಲ್ಲೂಕು ಸೇರಬೇಕು? ಬಳ್ಳಾರಿ ಜಿಲ್ಲೆಯಲ್ಲಿ ಯಾವ ತಾಲ್ಲೂಕುಗಳು ಉಳಿಯಬೇಕು ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ವಿಭಜನೆಯ ನಿರ್ಧಾರ ಮಾಡಿರುವ ಸರ್ಕಾರ ಆ ಬಗ್ಗೆ ಗೊಂದಲವನ್ನು ಮೊದಲು ಪರಿಹರಿಸಿ, ತಾಲ್ಲೂಕುಗಳ ಪಟ್ಟಿಯನ್ನು ಪ್ರಕಟಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಜಿಲ್ಲೆಯ ವಿಭಜನೆ ವಿರುದ್ಧ ಹೋರಾಟ ನಡೆದಿದ್ದರೂ, ಅದನ್ನು ದೊಡ್ಡಮಟ್ಟಕ್ಕೆ ಕೊಂಡೊಯ್ಯುವ ವಿಸೃತ ವೇದಿಕೆ ಮಾತ್ರ ಇನ್ನೂ ಸಂಪೂರ್ಣವಾಗಿ ನಿರ್ಮಾಣವಾಗಿಲ್ಲ. ಇನ್ನು ಎರಡು ದಿನದೊಳಗೆ ಈ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು.</p>.<p class="Briefhead"><strong>28ರಂದು ರಸ್ತೆ ತಡೆ</strong></p>.<p>‘ಬಳ್ಳಾರಿ ವಿಭಜನೆಯನ್ನು ವಿರೋಧಿಸಿ ಲೇಖಕ ಗುತ್ತಿ ಚಂದ್ರಶೇಖರ್ ನ.28ರಂದು ತಾಲ್ಲೂಕಿನ ಜೋಳದರಾಶಿ ಗ್ರಾಮದಲ್ಲಿ ರಸ್ತೆ ತಡೆಯನ್ನು ಹಮ್ಮಿಕೊಳ್ಳಲಿದ್ದು ಸಮಿತಿಯೂ ಬೆಂಬಲ ನೀಡಲಿದೆ . ಕೋಲಾರದ ಲೇಖಕ ಸ.ರಘುನಾಥ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು. ವಿದ್ಯಾರ್ಥಿಗಳು, ಸಾಹಿತಿ, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಬೇಕು’ ಎಂದು ಕೋರಿದರು.</p>.<p>ಮುಖಂಡರಾದ ಟಿ.ಜಿ.ವಿಠಲ್. ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಮಾನಯ್ಯ, ರಿಜ್ವಾನ್ಖಾನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>‘ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸುವ ಪ್ರಸ್ತಾಪವನ್ನು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯು ಬಲವಾಗಿ ವಿರೋಧಿಸುತ್ತದೆ’ ಎಂದು ಸಮಿತಿಯ ಸಂಚಾಲಕ ಎಸ್.ಪನ್ನರಾಜ್ ಪ್ರತಿಪಾದಿಸಿದರು.</p>.<p>'371 (ಜೆ) ವಿಶೇಷ ಮೀಸಲಾತಿ ದೊರಕುತ್ತದೆ ಎಂಬ ಕಾರಣಕ್ಕೆ ಹಿಂದೆ, ಕೊಪ್ಪಳ ಸುತ್ತಮುತ್ತಲಿನ 60 ಊರುಗಳನ್ನು ಆ ಜಿಲ್ಲೆಗೆ ಸೇರಿಸುವ ಪ್ರಯತ್ನ ನಡೆದಿತ್ತು. ಅದರೊಂದಿಗೆ ವಿಜಯಪುರವನ್ನು ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ತರುವ ಪ್ರಯತ್ನವನ್ನೂ ತಡೆಯಲಾಗಿತ್ತು. ಈಗ ಮೊಳಕಾಲ್ಮುರು ಸೇರ್ಪಡೆಗೂ ಸಮಿತಿ ಅವಕಾಶ ಕೊಡುವುದಿಲ್ಲ’ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ವಿಶೇಷ ಮೀಸಲಾತಿಯನ್ನು ಪಡೆಯಲು ಬಳ್ಳಾರಿ ಜಿಲ್ಲೆಯು ದೊಡ್ಡ ಹೋರಾಟವನ್ನೇ ಮಾಡಬೇಕಾಯಿತು. ಅಂಥ ಜಿಲ್ಲೆಗೆ ಸೇರಿದ್ದು ವಿಭಜನೆಯ ಬಳಿಕ ಅಸ್ತಿತ್ವಕ್ಕೆ ಬರಲಿರುವ ವಿಜಯನಗರಕ್ಕೂ ಅದನ್ನೂ ಪಡೆಯುವ ಹಕ್ಕಿದೆ. ಆದರೆ ಏಳನೇ ಜಿಲ್ಲೆಯಾಗಿ ಸೇರ್ಪಡೆಯಾಗಿರುವ ಬಗ್ಗೆ ಸಂವಿಧಾನ ತಿದ್ದುಪಡಿಯಾಗಬೇಕು’ ಎಂದು ಆಗ್ರಹಿಸಿದರು.</p>.<p>’ತಿದ್ದುಪಡಿಯಾಗದೇ ಇದ್ದು, ನ್ಯಾಯಾಲಯದಲ್ಲಿ ಯಾರಾದರೂ ಆಕ್ಷೇಪಣೆ ದಾಖಲಿಸಿದರೆ ತಾಂತ್ರಿಕ ಕಾರಣದಿಂದಾಗಿ ಮೀಸಲಾತಿಗೆ ತಾತ್ಕಾಲಿಕ ತಡೆ ಬೀಳುವ ಸಾಧ್ಯತೆ ಹೆಚ್ಚಿದೆ’ ಎಂದು ಆತಂಕ ವ್ಯಕ್ತಪಡಿಸಿದರು.</p>.<p>‘ಹೀಗಾಗಿ, ವಿಜಯನಗರ ಜಿಲ್ಲೆ ರಚನೆಯಾದ ಬಳಿಕ ವಿಶೇಷ ಮೀಸಲಾತಿ ಸೌಕರ್ಯ ಎಂದಿನಂತೆ ಮುಂದುವರಿಯುತ್ತದೆಯೇ ಎಂಬ ಬಗ್ಗೆ ರಾಜ್ಯ ಸರ್ಕಾರವು ಸಂವಿಧಾನ ತಜ್ಞರ ವರದಿಯನ್ನು ಪಡೆಯಬೇಕು. ನಂತರ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಬೇಕು. ಈ ವಿಷಯದಲ್ಲಿ ಸರ್ಕಾರ ಬಹಳ ಎಚ್ಚರಿಕೆಯಿಂದ ಮುಂದುವರಿಯಬೇಕು’ ಎಂದು ಆಗ್ರಹಿಸಿದರು.</p>.<p>‘ವಿಜಯನಗರ ಜಿಲ್ಲೆಗೆ ವಿಶೇಷ ಮೀಸಲಾತಿ ತೊಂದರೆಯಾಗದು. ವದಂತಿಗಳಿಗೆ ಕಿವಿ ಕೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ಸಿಂಗ್ ಹೇಳಿಕೆ ನೀಡಿದ್ದಾರೆ. ಆದರೆ, ಕಾನೂನಾತ್ಮಕವಾಗಿ ಸ್ಪಷ್ಟನೆ ನೀಡಿದರೆ ಮಾತ್ರ ಅದನ್ನು ಒಪ್ಪಬಹುದು’ ಎಂದು ಹೇಳಿದರು.</p>.<p><strong>ಗೊಂದಲ:</strong>’ಹೊಸ ಜಿಲ್ಲೆಗೆ ಯಾವ ತಾಲ್ಲೂಕು ಸೇರಬೇಕು? ಬಳ್ಳಾರಿ ಜಿಲ್ಲೆಯಲ್ಲಿ ಯಾವ ತಾಲ್ಲೂಕುಗಳು ಉಳಿಯಬೇಕು ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ವಿಭಜನೆಯ ನಿರ್ಧಾರ ಮಾಡಿರುವ ಸರ್ಕಾರ ಆ ಬಗ್ಗೆ ಗೊಂದಲವನ್ನು ಮೊದಲು ಪರಿಹರಿಸಿ, ತಾಲ್ಲೂಕುಗಳ ಪಟ್ಟಿಯನ್ನು ಪ್ರಕಟಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಜಿಲ್ಲೆಯ ವಿಭಜನೆ ವಿರುದ್ಧ ಹೋರಾಟ ನಡೆದಿದ್ದರೂ, ಅದನ್ನು ದೊಡ್ಡಮಟ್ಟಕ್ಕೆ ಕೊಂಡೊಯ್ಯುವ ವಿಸೃತ ವೇದಿಕೆ ಮಾತ್ರ ಇನ್ನೂ ಸಂಪೂರ್ಣವಾಗಿ ನಿರ್ಮಾಣವಾಗಿಲ್ಲ. ಇನ್ನು ಎರಡು ದಿನದೊಳಗೆ ಈ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು.</p>.<p class="Briefhead"><strong>28ರಂದು ರಸ್ತೆ ತಡೆ</strong></p>.<p>‘ಬಳ್ಳಾರಿ ವಿಭಜನೆಯನ್ನು ವಿರೋಧಿಸಿ ಲೇಖಕ ಗುತ್ತಿ ಚಂದ್ರಶೇಖರ್ ನ.28ರಂದು ತಾಲ್ಲೂಕಿನ ಜೋಳದರಾಶಿ ಗ್ರಾಮದಲ್ಲಿ ರಸ್ತೆ ತಡೆಯನ್ನು ಹಮ್ಮಿಕೊಳ್ಳಲಿದ್ದು ಸಮಿತಿಯೂ ಬೆಂಬಲ ನೀಡಲಿದೆ . ಕೋಲಾರದ ಲೇಖಕ ಸ.ರಘುನಾಥ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು. ವಿದ್ಯಾರ್ಥಿಗಳು, ಸಾಹಿತಿ, ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಬೇಕು’ ಎಂದು ಕೋರಿದರು.</p>.<p>ಮುಖಂಡರಾದ ಟಿ.ಜಿ.ವಿಠಲ್. ಜಿಲ್ಲಾ ಪಂಚಾಯ್ತಿ ಸದಸ್ಯ ಎ.ಮಾನಯ್ಯ, ರಿಜ್ವಾನ್ಖಾನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>