ಪಟ್ಟಣದ 19ನೇ ವಾರ್ಡ್ನ ಕೆ.ಕೆ ಹಟ್ಟಿ ನಿವಾಸಿ, ಡಿ.ಭಾರತಿ ಪತ್ರ ಬರೆದಿದ್ದು, ‘ನನ್ನ ತಂದೆಗೆ ಸ್ವಂತ ಕೃಷಿ ಭೂಮಿ ಇಲ್ಲ. ಬೇರೊಬ್ಬರ ಜಮೀನಿನಲ್ಲಿ ದುಡಿಯುತ್ತಾರೆ. ನನಗೆ ಬಿ.ಎಸ್ಸಿ ಕೃಷಿ ಕಲಿಯಬೇಕೆಂದು ತುಂಬಾ ಆಸಕ್ತಿಯಿದೆ. ಆದರೆ, ಪಾಲಕರ ಹೆಸರಿನಲ್ಲಿ ಪಹಣಿ ಪತ್ರ ಇಲ್ಲದ್ದರಿಂದ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.