ಹೊಸಪೇಟೆ (ವಿಜಯನಗರ): ಇಸ್ರೇಲ್ನ ಮುಖ್ಯ ಭದ್ರತಾ ಅಧಿಕಾರಿ ಜಾನಥನ್ ಜಾಡ್ಕ್ ಅವರು ಶುಕ್ರವಾರ ಕುಟುಂಬ ಸಮೇತ ವಿಶ್ವಪ್ರಸಿದ್ಧ ಹಂಪಿಗೆ ಭೇಟಿ ನೀಡಿದರು.
ಹಂಪಿ ವಿರೂಪಾಕ್ಷೇಶ್ವರ ದೇಗುಲ, ಸಾಸಿವೆ ಕಾಳು, ಕಡಲೆಕಾಳು ಗಣಪ, ಕಲ್ಲಿನ ತೇರು, ಉಗ್ರ ನರಸಿಂಹ, ವಿಜಯ ವಿಠಲ ದೇವಾಲಯ ಸೇರಿದಂತೆ ಇತರೆ ಸ್ಮಾರಕಗಳನ್ನು ಕಣ್ತುಂಬಿಕೊಂಡರು. ಅವರ ಭೇಟಿ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ವಿಶೇಷ ಭದ್ರತೆ ಒದಗಿಸಿದ್ದರು.