ತೋರಣಗಲ್ಲು (ಸಂಡೂರು ತಾಲ್ಲೂಕು): ಇಲ್ಲಿಗೆ ಸಮೀಪದ ಕುಡುತಿನಿ ಪಟ್ಟಣದ ನಾಗರೀಕರು ಜಿಂದಾಲ್ ನೌಕರರಿಗೆ ಮತ್ತು ಜಿಂದಾಲ್ ವಾಹನಗಳಿಗೆ ಪಟ್ಟಣದ ಒಳಗಡೆ ಪ್ರವೇಶಕ್ಕೆ ಶುಕ್ರವಾರ ಬೆಳಿಗ್ಗೆಯಿಂದ ನಿರ್ಬಂಧ ವಿಧಿಸಿದ್ದಾರೆ. ಜಿಂದಾಲ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜನ ಈ ನಿರ್ಧಾರ ಮಾಡಿದ್ದಾರೆ.