ರಾಯಚೂರು, ಕಲಬುರ್ಗಿ, ಬೀದರ್, ದಾವಣಗೆರೆ, ಗದಗ, ಹುಬ್ಬಳ್ಳಿ, ಹೈದರಾಬಾದ್, ಬೆಂಗಳೂರು, ಮಂಗಳೂರು ಸೇರಿದಂತೆ ಅನೇಕ ಊರುಗಳಿಗೆ ಜನ ಬಸ್ಗಳಲ್ಲಿ ತೆರಳಿದರು. ಎಲ್ಲ ಬಸ್ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವು. ಬೇರೆ ಕಡೆಗಳಿಂದ ಬಸ್ ಬರುತ್ತಿದ್ದಂತೆ ಜನ ಒಳಗೆ ಹೋಗಲು ಮೂಗಿ ಬೀಳುತ್ತಿರುವುದು ಕಂಡು ಬಂತು. ಅಂತರ ಇರದೆ ಪ್ರಯಾಣಿಕರು ಒಂದೆಡೆ ಸೇರಿದ್ದರು. ಖಾಸಗಿಯವರು ಕೂಡ ಹೆಚ್ಚುವರಿ ಬಸ್ಗಳನ್ನು ಬಿಟ್ಟಿದ್ದರು.