2016ರ ಏ.14ರಂದು ಸಂಜೆ 4.30ರ ಸುಮಾರಿಗೆ ಗ್ರಾಮದ ಕೆಂಚರೆಡ್ಡಿ ಚನ್ನಪ್ಪ ಅವರ ಕಣದಲ್ಲಿ ಬಿ.ಎಂ. ದೊಡ್ಡಬಸಯ್ಯ ಹಾಗೂ ಅವರ ತಂದೆ ಬಸವರಾಜಯ್ಯ ಔಡಲ ಬೀಜವನ್ನು ಬೇರ್ಪಡಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಹನುಮಂತ ರೆಡ್ಡಿ, ನಾಗರಾಜ ರೆಡ್ಡಿ, ‘ಹೊಲಕ್ಕೆ ದನಗಳನ್ನು ಬಿಟ್ಟು ಬೆಳೆ ಹಾಳು ಮಾಡಿದ್ದೀರಿ’ ಎಂದು ಬೈದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಹನುಮಂತ ರೆಡ್ಡಿ, ಕಣದಲ್ಲಿದ್ದ ಕಣಗದಿಂದ ಬಸವರಾಜಯ್ಯನವರ ತಲೆಯ ಬಲಭಾಗಕ್ಕೆ ಹೊಡೆದಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವವಾಗಿದ್ದ ಬಸವರಾಜಯ್ಯನವರನ್ನು ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.