ಭಾರಿ ವಾಹನಗಳ ಸಂಚಾರದಿಂದ ತಳವಾರಘಟ್ಟ ಮಂಟಪಕ್ಕೆ ಧಕ್ಕೆಯಾಗುವುದನ್ನು ತಪ್ಪಿಸಲು ಅದರ ರಕ್ಷಣೆಗೆ ಪ್ರವೇಶ ದ್ವಾರದಲ್ಲಿ ಲೋಹದ ಕಮಾನು ಅಳವಡಿಸಲಾಗಿದೆ. ಭದ್ರತಾ ಸಿಬ್ಬಂದಿ ಕೂಡ ನಿಯೋಜಿಸಲಾಗಿದೆ. ಆದರೆ, ಇತ್ತೀಚೆಗೆ ಅಲ್ಲಿ ಯಾರೂ ಭದ್ರತೆಗೆ ಇರಲಿಲ್ಲ. ಪ್ರವಾಸಿಗರ ವಾಹನವೊಂದು ಕಮಾನಿಗೆ ಡಿಕ್ಕಿ ಹೊಡೆದಿದ್ದರಿಂದ ಅದು ನೆಲಕ್ಕುರುಳಿತ್ತು. ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಅದರಿಂದ ಎಚ್ಚೆತ್ತುಕೊಂಡ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಅದನ್ನು ಮೊದಲಿನಂತೆ ಅಳವಡಿಸಿದೆ.