‘ಶಾಲಾ ಮಕ್ಕಳಿಗೆ ಎಂಆರ್ಪಿ ದರದಲ್ಲಿ ಪುಸ್ತಕಗಳನ್ನು ಕೊಡಬೇಕು. ಆದರೆ, ಅದಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಹಣ ಪಡೆಯುತ್ತಿದ್ದಾರೆ. ಸ್ವಂತ ಆ್ಯಪ್ ಮಾಡಿಕೊಂಡಿದ್ದಾರೆ. ಅದರ ಮೂಲಕವೇ ಪುಸ್ತಕ ಖರೀದಿಗೆ ವ್ಯವಸ್ಥೆ ಮಾಡಿದ್ದಾರೆ. ಆದರೆ, ಅದರ ರಸೀದಿ ಬೇರೊಂದು ಕಂಪನಿಯ ಹೆಸರಿನಲ್ಲಿ ಬರುತ್ತದೆ. ಯಾವುದೇ ಶಾಲೆಯವರು ಶಾಲೆ ಶುಲ್ಕ, ಪುಸ್ತಕಗಳನ್ನು ಕೊಟ್ಟರೆ ಸ್ಥಳೀಯ ವಿಳಾಸದಲ್ಲಿ ರಸೀದಿ ಕೊಡಬೇಕು. ಆದರೆ, ಬೆಂಗಳೂರಿನಲ್ಲಿರುವ ಕಂಪನಿಯ ಹೆಸರಿನಲ್ಲಿ ರಸೀದಿ ಕೊಟ್ಟು ವಂಚಿಸುತ್ತಿದ್ದಾರೆ’ ಎಂದು ಆರೋಪ ಮಾಡಿದ್ದಾರೆ.