<p><strong>ಹೊಸಪೇಟೆ (ವಿಜಯನಗರ):</strong> ವಿಶ್ವಪ್ರಸಿದ್ಧ ಹಂಪಿ ಮತ್ತೆ ಮೌನಕ್ಕೆ ಜಾರಿದೆ.</p>.<p>ಕೊರೊನಾ ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತವು ಶನಿವಾರ, ಭಾನುವಾರ ಹಂಪಿಯ ಎಲ್ಲ ಸ್ಮಾರಕಗಳ ವೀಕ್ಷಣೆಯನ್ನು ನಿರ್ಬಂಧಿಸಿದೆ. ಸದಾ ಪ್ರವಾಸಿಗರಿಂದ ತುಂಬಿರುತ್ತಿದ್ದ ಹಂಪಿಯಲ್ಲಿ ಭಾನುವಾರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.</p>.<p>ಪ್ರವಾಸಿಗರು ಹಂಪಿಗೆ ಬರದಂತೆ ತಡೆಯಲು ಕಮಲಾಪುರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ, ಬಂದೋಬಸ್ತ್ ಮಾಡಲಾಗಿದೆ. ಸ್ವತಃ ಹಂಪಿ ಠಾಣೆ ಸಿಪಿಐ ದೊಡ್ಡಣ್ಣ ಅವರು ಭಾನುವಾರ ಸ್ಥಳದಲ್ಲಿದ್ದರು. ಇನ್ನು, ಕಡ್ಡಿರಾಂಪುರ ಬಳಿಯೂ ಪ್ರವಾಸಿಗರು ಬರದಂತೆ ತಡೆಯಲಾಗುತ್ತಿದೆ.</p>.<p>ವಾರಾಂತ್ಯಕ್ಕೆ ರಜೆ ಇರುವುದರಿಂದ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಬಂದಿದ್ದರು. ಆದರೆ, ನಿರ್ಬಂಧ ಹೇರಿರುವ ವಿಷಯ ತಿಳಿದು, ವಾಪಸಾದರು. ಕೆಲವರು ಏನಾದರಾಗಲಿ ಒಂದು ಸಲ ಪ್ರಯತ್ನಿಸೋಣ ಎಂದು ಹಂಪಿ ಸಮೀಪ ಹೋಗಿ ಹಿಂತಿರುಗಿದರು.</p>.<p>ಪ್ರವಾಸಿಗರೇ ಇಲ್ಲದ ಕಾರಣ ರಥಬೀದಿ ಹಾಗೂ ಪ್ರಮುಖ ಸ್ಮಾರಕಗಳ ಪರಿಸರ ಬಿಕೋ ಎನ್ನುತ್ತಿತ್ತು. ಇಡೀ ಪರಿಸರ ಶಾಂತವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ವಿಶ್ವಪ್ರಸಿದ್ಧ ಹಂಪಿ ಮತ್ತೆ ಮೌನಕ್ಕೆ ಜಾರಿದೆ.</p>.<p>ಕೊರೊನಾ ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತವು ಶನಿವಾರ, ಭಾನುವಾರ ಹಂಪಿಯ ಎಲ್ಲ ಸ್ಮಾರಕಗಳ ವೀಕ್ಷಣೆಯನ್ನು ನಿರ್ಬಂಧಿಸಿದೆ. ಸದಾ ಪ್ರವಾಸಿಗರಿಂದ ತುಂಬಿರುತ್ತಿದ್ದ ಹಂಪಿಯಲ್ಲಿ ಭಾನುವಾರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.</p>.<p>ಪ್ರವಾಸಿಗರು ಹಂಪಿಗೆ ಬರದಂತೆ ತಡೆಯಲು ಕಮಲಾಪುರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ, ಬಂದೋಬಸ್ತ್ ಮಾಡಲಾಗಿದೆ. ಸ್ವತಃ ಹಂಪಿ ಠಾಣೆ ಸಿಪಿಐ ದೊಡ್ಡಣ್ಣ ಅವರು ಭಾನುವಾರ ಸ್ಥಳದಲ್ಲಿದ್ದರು. ಇನ್ನು, ಕಡ್ಡಿರಾಂಪುರ ಬಳಿಯೂ ಪ್ರವಾಸಿಗರು ಬರದಂತೆ ತಡೆಯಲಾಗುತ್ತಿದೆ.</p>.<p>ವಾರಾಂತ್ಯಕ್ಕೆ ರಜೆ ಇರುವುದರಿಂದ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಬಂದಿದ್ದರು. ಆದರೆ, ನಿರ್ಬಂಧ ಹೇರಿರುವ ವಿಷಯ ತಿಳಿದು, ವಾಪಸಾದರು. ಕೆಲವರು ಏನಾದರಾಗಲಿ ಒಂದು ಸಲ ಪ್ರಯತ್ನಿಸೋಣ ಎಂದು ಹಂಪಿ ಸಮೀಪ ಹೋಗಿ ಹಿಂತಿರುಗಿದರು.</p>.<p>ಪ್ರವಾಸಿಗರೇ ಇಲ್ಲದ ಕಾರಣ ರಥಬೀದಿ ಹಾಗೂ ಪ್ರಮುಖ ಸ್ಮಾರಕಗಳ ಪರಿಸರ ಬಿಕೋ ಎನ್ನುತ್ತಿತ್ತು. ಇಡೀ ಪರಿಸರ ಶಾಂತವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>