<p><strong>ಯಾದಗಿರಿ:</strong> ‘ಕೈಉತ್ಪನ್ನಗಳಿಗೆ ನ್ಯಾಯಬೆಲೆ ಕೊಡಿ’ ಎಂದು ಆಗ್ರಹಿಸಿ ಹಿರಿಯ ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲ್ಲಿ ಗ್ರಾಮ ಸೇವಾ ಸಂಘವು ಹಮ್ಮಿಕೊಂಡಿರುವ ಪಾದಯಾತ್ರೆಯು ಮಂಗಳವಾರ ಜಿಲ್ಲೆಯ ಕೊಡೇಕಲ್ನಿಂದ ಆರಂಭವಾಯಿತು.</p>.<p>ಈ ಪಾದಯಾತ್ರೆಯು 15 ದಿನಗಳಲ್ಲಿ 246 ಕಿಲೋ ಮೀಟರ್ ಕ್ರಮಿಸಿ, ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಮುಕ್ತಾಯಗೊಳ್ಳಲಿದೆ.</p>.<p>‘ಏಕತಾ ಸಮಾವೇಶ ಮತ್ತು ಪಾದಯಾತ್ರೆಯು ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಕರ ನಿರಾಕರಣಾ ಸತ್ಯಾಗ್ರಹದ ಮುಂದುವರಿಕೆಯಾಗಿದೆ’ ಎಂದು ಪಾದಯಾತ್ರೆ ಕಾರ್ಯಕರ್ತ ರಾಜೇಸಾಬ್ ಬಾಗವಾನ ಹೇಳಿದರು.</p>.<p>2014 ರಲ್ಲಿ ನೇಕಾರರು ಪ್ರಸನ್ನ ಅವರ ನೇತೃತ್ವದಲ್ಲಿ ಸುಸ್ಥಿರ ಬದುಕಿನ ಸತ್ಯಾಗ್ರಹ ನಡೆಸಿದ್ದರು. 2015ರಲ್ಲಿ ಪುನಃ ಮೈಸೂರು ಜಿಲ್ಲೆಯ ಬದನವಾಳುನಲ್ಲಿ ಸತ್ಯಾಗ್ರಹ ನಡೆಸಲಾಗಿತ್ತು. ಈಗ ಕಾಯಕಜೀವಿಗಳ ಏಕತಾ ಸಮಾವೇಶ ಹಾಗೂ ಕೈ ಉತ್ಪನ್ನಗಳಿಗಾಗಿ ಪಾದಯಾತ್ರೆ ಮುಂದುವರಿದಿದೆ.</p>.<p>ಪಾದಯಾತ್ರೆ ಆರಂಭದಲ್ಲಿ ಹಿರಿಯ ಪತ್ರಕರ್ತ ರಂಜಾನ್ ದರ್ಗಾ, ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಇದ್ದರು.</p>.<p>ಬಾಗಲಕೋಟೆ, ರಾಯಚೂರು, ಗದಗ, ಕಲಬುರ್ಗಿ ಜಿಲ್ಲೆಗಳ ಕೈ ಉತ್ಪನ್ನಗಳ ಉತ್ಪಾದಕರು, ಕುಶಲಕರ್ಮಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ‘ಕೈಉತ್ಪನ್ನಗಳಿಗೆ ನ್ಯಾಯಬೆಲೆ ಕೊಡಿ’ ಎಂದು ಆಗ್ರಹಿಸಿ ಹಿರಿಯ ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲ್ಲಿ ಗ್ರಾಮ ಸೇವಾ ಸಂಘವು ಹಮ್ಮಿಕೊಂಡಿರುವ ಪಾದಯಾತ್ರೆಯು ಮಂಗಳವಾರ ಜಿಲ್ಲೆಯ ಕೊಡೇಕಲ್ನಿಂದ ಆರಂಭವಾಯಿತು.</p>.<p>ಈ ಪಾದಯಾತ್ರೆಯು 15 ದಿನಗಳಲ್ಲಿ 246 ಕಿಲೋ ಮೀಟರ್ ಕ್ರಮಿಸಿ, ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಮುಕ್ತಾಯಗೊಳ್ಳಲಿದೆ.</p>.<p>‘ಏಕತಾ ಸಮಾವೇಶ ಮತ್ತು ಪಾದಯಾತ್ರೆಯು ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಕರ ನಿರಾಕರಣಾ ಸತ್ಯಾಗ್ರಹದ ಮುಂದುವರಿಕೆಯಾಗಿದೆ’ ಎಂದು ಪಾದಯಾತ್ರೆ ಕಾರ್ಯಕರ್ತ ರಾಜೇಸಾಬ್ ಬಾಗವಾನ ಹೇಳಿದರು.</p>.<p>2014 ರಲ್ಲಿ ನೇಕಾರರು ಪ್ರಸನ್ನ ಅವರ ನೇತೃತ್ವದಲ್ಲಿ ಸುಸ್ಥಿರ ಬದುಕಿನ ಸತ್ಯಾಗ್ರಹ ನಡೆಸಿದ್ದರು. 2015ರಲ್ಲಿ ಪುನಃ ಮೈಸೂರು ಜಿಲ್ಲೆಯ ಬದನವಾಳುನಲ್ಲಿ ಸತ್ಯಾಗ್ರಹ ನಡೆಸಲಾಗಿತ್ತು. ಈಗ ಕಾಯಕಜೀವಿಗಳ ಏಕತಾ ಸಮಾವೇಶ ಹಾಗೂ ಕೈ ಉತ್ಪನ್ನಗಳಿಗಾಗಿ ಪಾದಯಾತ್ರೆ ಮುಂದುವರಿದಿದೆ.</p>.<p>ಪಾದಯಾತ್ರೆ ಆರಂಭದಲ್ಲಿ ಹಿರಿಯ ಪತ್ರಕರ್ತ ರಂಜಾನ್ ದರ್ಗಾ, ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಇದ್ದರು.</p>.<p>ಬಾಗಲಕೋಟೆ, ರಾಯಚೂರು, ಗದಗ, ಕಲಬುರ್ಗಿ ಜಿಲ್ಲೆಗಳ ಕೈ ಉತ್ಪನ್ನಗಳ ಉತ್ಪಾದಕರು, ಕುಶಲಕರ್ಮಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>