<p><strong>ಕೂಡ್ಲಿಗಿ</strong>: ಪುರಾತನ ಪಳೆಯುಳಿಕೆಗಳು, ಐತಿಹಾಸಿಕ ದೇವಸ್ಥಾನಗಳು, ಪಾಳೆಗಾರರು ಆಳಿದ ಸ್ಥಳಗಳು, ಗುಡೇಕೋಟೆಯ ಕರಡಿ ಧಾಮ, ಪಟ್ಟಣದಲ್ಲಿನ ಗಾಂಧೀಜಿ ಚಿತಾ ಭಸ್ಮವಿರುವ ಹುತಾತ್ಮರ ಸ್ಮಾರಕ... ಇವು ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳು.</p>.<p>ತಾಲ್ಲೂಕಿನ ಗುಣಸಾಗರದಲ್ಲಿ ವಿಜಯನಗರ ಆರಸರ ಕಾಲದ್ದು ಎನ್ನಲಾದ ಶ್ರೀ ಕೃಷ್ಣ ದೇವಸ್ಥಾನವಿದೆ. ಏಕಶಿಲೆಯಿಂದ ಕೆತ್ತನೆ ಮಾಡಿರುವ ವೇಣುಗೋಪಾಲಕೃಷ್ಣನ ಸುಂದರ ಮೂರ್ತಿಯಿಂದ ಈ ಸ್ಥಳ ಪ್ರಸಿದ್ಧಿ ಪಡೆದಿದೆ. ಈ ದೇವಾಲಯವನ್ನು ಮಹಾನ್ ಶಿಲ್ಪಿ ಜಕಣಾಚಾರಿ ನಿರ್ಮಿಸಿದ್ದರು ಎಂದು ಹೇಳಲಾಗುತ್ತದೆ.</p>.<p>ಚಿತ್ರದುರ್ಗದ ಒನಕೆ ಓಬವ್ವ ತವರೂರಾದ ಗುಡೇಕೋಟೆಯಲ್ಲಿ ಪಾಳೆಗಾರರು ಆಳಿದ ಆನೇಕ ಕುರುಹುಗಳಿವೆ. ಗ್ರಾಮದ ಪಕ್ಕದಲ್ಲಿರುವ ಬೆಟ್ಟದಲ್ಲಿ ಉಗ್ರಾಣ, ಸಿಹಿ ನೀರಿನ ಭಾವಿ, ಕೋಟೆಯ ಕುರುಹುಗಳಿವೆ. ಗ್ರಾಮದಲ್ಲಿ ಶಿವನ ತೊಡೆಯ ಮೇಲೆ ಪಾರ್ವತಿ ಕುಳಿತಿರುವ ಅಪರೂಪದ ಮೂರ್ತಿ ಇರುವ ದೇವಸ್ಥಾನ ಗಮನ ಸೆಳೆಯುತ್ತದೆ.</p>.<p>ಜರಿಮಲೆಯಲ್ಲಿ ವಿಶಾಲವಾದ ಪ್ರದೇಶದಲ್ಲಿ ಕೋಟೆಯ ಅವಶೇಷಗಳಿವೆ. ಕೋಟೆಯ ಹೆಬ್ಬಾಗಿಲು, ಆನೆ ಹೊಂಡ, ಶಸ್ತ್ರಾಸ್ತ್ರ ಉಗ್ರಾಣ ಮತ್ತಿತರ ಕುರುಹುಗಳಿವೆ. ಪಾಳೇಗಾರರ ಕೊನೆಯ ತಲೆಮಾರಿನ ಸಿದ್ದಪ್ಪ ನಾಯಕರು ಈಗಲೂ ಇದ್ದಾರೆ. ಜರಿಮಲೆಯ ಸೀತಾಫಲ ಹಣ್ಣು ಈ ಭಾಗದಲ್ಲಿ ಪ್ರಸಿದ್ಧ. ಅದರಲ್ಲೂ ದೊಡ್ಡ ಗಾತ್ರದ ಉಪ್ಪರಿಗೆ ಹಣ್ಣುಗಳು ಸಿಹಿಯಲ್ಲಿ ಮಧುರ.</p>.<p>ಅದರಂತೆ ಕಾನಾಮಡಗು ಗ್ರಾಮದ ದಾಸೋಹಮಠ, ಕುಮತಿ ಬಳಿಯ ಶಿಲಾಯುಗದ ಮಾನಾವಕೃತಿ ರಕ್ಕಸಗಲ್ಲುಗಳು, ಕೈವಲ್ಯಾಪುರದ ಅನಂತಪದ್ಮನಾಭ ದೇವಸ್ಥಾನ, ಬೀರಗಲಗುಡ್ಡದ ಪಾಳೆಗಾರ ಬಸಪ್ಪ ನಾಯಕ ನಿರ್ಮಾಣ ಮಾಡಿದ ವೀರನದುರ್ಗ ಕೋಟೆ ನೋಡುಗರನ್ನು ಸೆಳೆಯುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡ್ಲಿಗಿ</strong>: ಪುರಾತನ ಪಳೆಯುಳಿಕೆಗಳು, ಐತಿಹಾಸಿಕ ದೇವಸ್ಥಾನಗಳು, ಪಾಳೆಗಾರರು ಆಳಿದ ಸ್ಥಳಗಳು, ಗುಡೇಕೋಟೆಯ ಕರಡಿ ಧಾಮ, ಪಟ್ಟಣದಲ್ಲಿನ ಗಾಂಧೀಜಿ ಚಿತಾ ಭಸ್ಮವಿರುವ ಹುತಾತ್ಮರ ಸ್ಮಾರಕ... ಇವು ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳು.</p>.<p>ತಾಲ್ಲೂಕಿನ ಗುಣಸಾಗರದಲ್ಲಿ ವಿಜಯನಗರ ಆರಸರ ಕಾಲದ್ದು ಎನ್ನಲಾದ ಶ್ರೀ ಕೃಷ್ಣ ದೇವಸ್ಥಾನವಿದೆ. ಏಕಶಿಲೆಯಿಂದ ಕೆತ್ತನೆ ಮಾಡಿರುವ ವೇಣುಗೋಪಾಲಕೃಷ್ಣನ ಸುಂದರ ಮೂರ್ತಿಯಿಂದ ಈ ಸ್ಥಳ ಪ್ರಸಿದ್ಧಿ ಪಡೆದಿದೆ. ಈ ದೇವಾಲಯವನ್ನು ಮಹಾನ್ ಶಿಲ್ಪಿ ಜಕಣಾಚಾರಿ ನಿರ್ಮಿಸಿದ್ದರು ಎಂದು ಹೇಳಲಾಗುತ್ತದೆ.</p>.<p>ಚಿತ್ರದುರ್ಗದ ಒನಕೆ ಓಬವ್ವ ತವರೂರಾದ ಗುಡೇಕೋಟೆಯಲ್ಲಿ ಪಾಳೆಗಾರರು ಆಳಿದ ಆನೇಕ ಕುರುಹುಗಳಿವೆ. ಗ್ರಾಮದ ಪಕ್ಕದಲ್ಲಿರುವ ಬೆಟ್ಟದಲ್ಲಿ ಉಗ್ರಾಣ, ಸಿಹಿ ನೀರಿನ ಭಾವಿ, ಕೋಟೆಯ ಕುರುಹುಗಳಿವೆ. ಗ್ರಾಮದಲ್ಲಿ ಶಿವನ ತೊಡೆಯ ಮೇಲೆ ಪಾರ್ವತಿ ಕುಳಿತಿರುವ ಅಪರೂಪದ ಮೂರ್ತಿ ಇರುವ ದೇವಸ್ಥಾನ ಗಮನ ಸೆಳೆಯುತ್ತದೆ.</p>.<p>ಜರಿಮಲೆಯಲ್ಲಿ ವಿಶಾಲವಾದ ಪ್ರದೇಶದಲ್ಲಿ ಕೋಟೆಯ ಅವಶೇಷಗಳಿವೆ. ಕೋಟೆಯ ಹೆಬ್ಬಾಗಿಲು, ಆನೆ ಹೊಂಡ, ಶಸ್ತ್ರಾಸ್ತ್ರ ಉಗ್ರಾಣ ಮತ್ತಿತರ ಕುರುಹುಗಳಿವೆ. ಪಾಳೇಗಾರರ ಕೊನೆಯ ತಲೆಮಾರಿನ ಸಿದ್ದಪ್ಪ ನಾಯಕರು ಈಗಲೂ ಇದ್ದಾರೆ. ಜರಿಮಲೆಯ ಸೀತಾಫಲ ಹಣ್ಣು ಈ ಭಾಗದಲ್ಲಿ ಪ್ರಸಿದ್ಧ. ಅದರಲ್ಲೂ ದೊಡ್ಡ ಗಾತ್ರದ ಉಪ್ಪರಿಗೆ ಹಣ್ಣುಗಳು ಸಿಹಿಯಲ್ಲಿ ಮಧುರ.</p>.<p>ಅದರಂತೆ ಕಾನಾಮಡಗು ಗ್ರಾಮದ ದಾಸೋಹಮಠ, ಕುಮತಿ ಬಳಿಯ ಶಿಲಾಯುಗದ ಮಾನಾವಕೃತಿ ರಕ್ಕಸಗಲ್ಲುಗಳು, ಕೈವಲ್ಯಾಪುರದ ಅನಂತಪದ್ಮನಾಭ ದೇವಸ್ಥಾನ, ಬೀರಗಲಗುಡ್ಡದ ಪಾಳೆಗಾರ ಬಸಪ್ಪ ನಾಯಕ ನಿರ್ಮಾಣ ಮಾಡಿದ ವೀರನದುರ್ಗ ಕೋಟೆ ನೋಡುಗರನ್ನು ಸೆಳೆಯುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>