‘ಕಾಮಗಾರಿಯನ್ನು ಅಂದಾಜು ಪತ್ರಿಕೆಯಂತೆ ನಿರ್ವಹಿಸದೇ ಹೆಚ್ಚು ಲಾಭದ ಆಸೆಯಿಂದ ಗುತ್ತಿಗೆದಾರರು ತೀರಾ ಕಳಪೆ ಕೆಲಸ ಮಾಡಿದ್ದಾರೆ. ಹೊಸದಾಗಿ ನಿರ್ಮಾಣವಾದ ರಸ್ತೆಯ ಲ್ಲಿಯೇ ಕೆಲವೆಡೆ ಆಳವಾದ ಗುಂಡಿಗಳು ಬಿದ್ದಿವೆ. ಬೈಕ್ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಮೇಲಧಿಕಾರಿಗಳು ಗಮನಹರಿಸಿ, ರಸ್ತೆಯ ಮರು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಜೈನ್ ಒತ್ತಾಯಿಸಿದ್ದಾರೆ.