ಬಳ್ಳಾರಿ: ಸಂಡೂರಿನಲ್ಲಿ ತಾಯಿ ಮತ್ತು ಮಕ್ಕಳಿಬ್ಬರು ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಾರ್ವತಿ (37), ಶ್ರೇಯಾ (16) ಹಾಗೂ ಮಾನಸ (13) ಮೃತರು. ಸಿರಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದವರಾದ ಇವರು ಸಂಡೂರಿನಲ್ಲಿ ಕಿರಾಣಿ ಅಂಗಡಿ ಇಟ್ಟಿದ್ದರು.
ಶ್ರೇಯಾ ಶವ ಶುಕ್ರವಾರ ತಿರುಮಲ ನಗರ ಕ್ಯಾಂಪ್ನ 15ನೇ ವಿತರಣಾ ಕಾಲುವೆಯಲ್ಲಿ, ಮಾನಸ ಮೃತದೇಹ ಶನಿವಾರ ತಾಳೂರು ರಸ್ತೆಯಲ್ಲಿರುವ 14ನೇ ವಿತರಣಾ ಕಾಲುವೆ ಬಳಿ ಹಾಗೂ ಪಾರ್ವತಿ ಶವ ಭಾನುವಾರ ಅಸುಂಡಿ ಬಳಿಯ 15ನೇ ವಿತರಣಾ ಕಾಲುವೆಯಲ್ಲಿ ಸಿಕ್ಕಿದೆ.
ಪಾರ್ವತಿ ಅವರ ಪತಿ ಶಂಕರ್ ಅವರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು. ಪಿ.ಡಿ ಹಳ್ಳಿ ಹಾಗೂ ಬಳ್ಳಾರಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.