‘ರಾಮನ ಜನ್ಮಸ್ಥಳ ಅಯೋಧ್ಯೆಗೆ ರೈಲು ಓಡಿಸಲು ಚಿಂತನೆ ನಡೆಸಿರುವುದು ಸ್ವಾಗತಾರ್ಹ. ರಾಮಾಯಣದಲ್ಲಿ ಉಲ್ಲೇಖಿಸಿರುವ ಕಿಷ್ಕಿಂದೆ, ಹಂಪಿ, ಅಂಜನಾದ್ರಿ ನಗರಕ್ಕೆ ಹೊಂದಿಕೊಂಡಿವೆ. ವರ್ಷಕ್ಕೊಮ್ಮೆ ಓಡುವ ‘ಶ್ರೀರಾಮಾಯಣ ದರ್ಶನಂ’ ರೈಲು ಸಹ ಪ್ರವಾಸಿಗರನ್ನು ಹಂಪಿಗೆ ಕರೆದುಕೊಂಡು ಬರುತ್ತದೆ. ಇಷ್ಟೆಲ್ಲ ಐತಿಹಾಸಿಕ ಹಿನ್ನೆಲೆ ನಗರಕ್ಕೆ ಇದೆ. ಹಾಗಾಗಿ ಆ ರೈಲು ನಗರದ ಮೂಲಕ ಸಂಚರಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ’ ಎಂದು ತಿಳಿಸಿದ್ದಾರೆ.