ಸ್ಥಳದಲ್ಲಿದ್ದ ಬಹುತೇಕರು ಚಾಲಕರ ನೆರವಿಗೆ ಬಾರದೆ ದೃಶ್ಯವನ್ನು ಮೊಬೈಲ್ಫೋನ್ಗಳಲ್ಲಿ ಚಿತ್ರೀಕರಿಸುತ್ತಿದ್ದರು. ಕುಡುತಿನಿ ಪಟ್ಟಣ ಪಂಚಾಯ್ತಿ ಮತ ಎಣಿಕೆ ವರದಿಗಾರಿಕೆಗಾಗಿ ತಹಶೀಲ್ದಾರ್ ಕಚೇರಿಗೆ ಅದೇ ರಸ್ತೆ ಮೂಲಕ ತೆರಳುತ್ತಿದ್ದ ದುರ್ಗೇಶ್, ಕೂಡಲೇ ಅಲ್ಲಿದ್ದವರ ನೆರವಿನಿಂದ ಚಾಲಕರನ್ನು ರಿಕ್ಷಾದಿಂದ ಕೆಳಕ್ಕೆ ಇಳಿಸಿದರು. ಮತ್ತೊಂದು ಆಟೋರಿಕ್ಷಾದಲ್ಲಿ ಅವರನ್ನು ಕುಳ್ಳಿರಿಸಿ ಸಂಚಾರಿ ಠಾಣೆಯ ಕಾನ್ಸ್ಟೆಬಲ್ ಒಬ್ಬರ ಮೂಲಕ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರು.