‘ಸಭೆಗೆ ಮೊದಲೇ ಏಕೆ ಪ್ರಕಟಣೆ ಕೊಡಲಿಲ್ಲ, ಕೊಟ್ಟಿದ್ದರೆ ಲಕ್ಷಾಂತರ ಭಕ್ತರು ಭಾಗವಹಿಸಿ ವೀರಶೈವ ಸಮುದಾಯದ ಶಕ್ತಿಯನ್ನು ಹೆಚ್ಚಿಸುತ್ತಿದ್ದರು. ಎಲ್ಲಾ ಪಂಚಾಚಾರ್ಯರನ್ನಾದರೂ ಆಹ್ವಾನಿಸಬೇಕಿತ್ತು. ಇದಾವುದನ್ನೂ ಮಾಡದೇ ಉಜ್ಜಯಿನಿ ಪೀಠಕ್ಕೆ ಯಾವುದೋ ಸ್ವಾಮಿಯನ್ನು ಪಟ್ಟ ಕಟ್ಟಿದ್ದೇವೆ ಎನ್ನಲಿಕ್ಕೆ ಅದು ಹುಡುಗಾಟವಾಯಿತೇ? 11 ವರ್ಷಗಳ ಹಿಂದೆ ಒಬ್ಬರಿಗೆ ಪಟ್ಟ ಕಟ್ಟಿ ಈಗ ಅದು ಸರಿ ಇಲ್ಲ ಎಂದು ಏಕಾಏಕಿ ಹೇಳಲು ಮನಸ್ಸಾದರೂ ಹೇಗೆ ಬಂತು ಉತ್ತರಿಸಿ’ ಎಂದು ಅವರು ಸ್ವಾಮೀಜಿಗಳನ್ನು ಆಗ್ರಹಿಸಿದ್ದಾರೆ.