<p>ಸಂಪತ್ತೆಂದರೆ ಕೇವಲ ಹಣ,ಭೂಮಿ, ಬಂಗಾರ, ಬೆಳ್ಳಿ ಅಲ್ಲ. ಈ ಸಂಪತ್ತು ಬರೀ ಭೌತಿಕವಾದದ್ದು. ಮನುಷ್ಯ ಉನ್ನತಿಗಾಗಿ ಪ್ರೀತಿ, ಪ್ರೇಮ, ವಿಶ್ವಾಸ, ಕ್ಷಮೆ, ದಯೆ, ಶಾಂತಿ ಸೈರಣೆಯ ಸಂಪತ್ತು ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ವಿಕಾರ ಭಾವಗಳು ಮೂಡಿದರೆ ಸರ್ವನಾಶಕ್ಕೆ ಕಾರಣವಾಗುತ್ತವೆ. ಮುಖ್ಯವಾಗಿ ಶಿವ ಚಿಂತನೆ, ಶಿವ ಧ್ಯಾನ ಮಾಡುವುದರಿಂದ ಮನಸ್ಸಿನ ತೊಳಲಾಟ ನಿವಾರಣೆಯಾಗಿ ಶಿವ ರೂಪ, ಸಚ್ಚಾರಿತ್ರ್ಯದ ಗುಣಗಳು ಮೂಡುತ್ತವೆ. ಸಮಾಜದ ಸ್ವಾಸ್ಥ ಕಾಯ್ದುಕೊಳ್ಳುವಲ್ಲಿ ಇವೆಲ್ಲವು ಸಹಕಾರಿಯಾಗಿವೆ. ಭೌತಿಕ ಸಂಪತ್ತು ಹೆಚ್ಚಾದಂತೆ ಮನಸ್ಸು ಕಲುಷಿತಗೊಳ್ಳುತ್ತದೆ. ಸಂಪತ್ತು ಬದುಕಿನ ಅವಶ್ಯಕತೆಗೆ ತಕ್ಕಷ್ಟು ಇದ್ದರೆ ಮನುಷ್ಯ ಸುಖಿಯಾಗಿರುತ್ತಾನೆ. ಹೆಚ್ಚಾದರೆ ವಿಲಾಸಿಯಾಗಿ ನಾನಾ ಸಂಕಷ್ಟಗಳಿಗೆ ಗುರಿಯಾಗುತ್ತಾನೆ. ಪರಿಶುದ್ಧ ಕಾಯಕದಿಂದ ಬಂದ ಸಂಪಾದನೆಯ ಒಂದು ಭಾಗವನ್ನು ಸಮಾಜದ ಹಿತಕ್ಕೆ ಬಳಸಬೇಕು. ದುರಾಸೆಯಿಂದ ಅನಂತ ಕಾಲ ಬದುಕಬಹುದು ಎಂಬುದು ಕನಸಿನ ಮಾತು. ಮನುಷ್ಯನ ದುರಾಸೆಗೆ ಪ್ರಕೃತಿಯೇ ಪಾಠ ಕಲಿಸಿರುವುದನ್ನು ಕಂಡಿದ್ದೇವೆ. ನಿಷ್ಠೆ, ಪ್ರಾಮಾಣಿಕತೆ,ಶ್ರದ್ಧೆ, ಪ್ರೀತಿ, ಸೇವೆಯ ಭಾವನೆಗಳು ಅರಳಿದರೆ ಬದುಕು ಸಾರ್ಥಕಗೊಳ್ಳುತ್ತದೆ.</p>.<p>- ಹಿರಿಶಾಂತವೀರ ಮಹಾಸ್ವಾಮಿಗಳು, ಗವಿಮಠ, ಹೂವಿನಹಡಗಲಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂಪತ್ತೆಂದರೆ ಕೇವಲ ಹಣ,ಭೂಮಿ, ಬಂಗಾರ, ಬೆಳ್ಳಿ ಅಲ್ಲ. ಈ ಸಂಪತ್ತು ಬರೀ ಭೌತಿಕವಾದದ್ದು. ಮನುಷ್ಯ ಉನ್ನತಿಗಾಗಿ ಪ್ರೀತಿ, ಪ್ರೇಮ, ವಿಶ್ವಾಸ, ಕ್ಷಮೆ, ದಯೆ, ಶಾಂತಿ ಸೈರಣೆಯ ಸಂಪತ್ತು ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ವಿಕಾರ ಭಾವಗಳು ಮೂಡಿದರೆ ಸರ್ವನಾಶಕ್ಕೆ ಕಾರಣವಾಗುತ್ತವೆ. ಮುಖ್ಯವಾಗಿ ಶಿವ ಚಿಂತನೆ, ಶಿವ ಧ್ಯಾನ ಮಾಡುವುದರಿಂದ ಮನಸ್ಸಿನ ತೊಳಲಾಟ ನಿವಾರಣೆಯಾಗಿ ಶಿವ ರೂಪ, ಸಚ್ಚಾರಿತ್ರ್ಯದ ಗುಣಗಳು ಮೂಡುತ್ತವೆ. ಸಮಾಜದ ಸ್ವಾಸ್ಥ ಕಾಯ್ದುಕೊಳ್ಳುವಲ್ಲಿ ಇವೆಲ್ಲವು ಸಹಕಾರಿಯಾಗಿವೆ. ಭೌತಿಕ ಸಂಪತ್ತು ಹೆಚ್ಚಾದಂತೆ ಮನಸ್ಸು ಕಲುಷಿತಗೊಳ್ಳುತ್ತದೆ. ಸಂಪತ್ತು ಬದುಕಿನ ಅವಶ್ಯಕತೆಗೆ ತಕ್ಕಷ್ಟು ಇದ್ದರೆ ಮನುಷ್ಯ ಸುಖಿಯಾಗಿರುತ್ತಾನೆ. ಹೆಚ್ಚಾದರೆ ವಿಲಾಸಿಯಾಗಿ ನಾನಾ ಸಂಕಷ್ಟಗಳಿಗೆ ಗುರಿಯಾಗುತ್ತಾನೆ. ಪರಿಶುದ್ಧ ಕಾಯಕದಿಂದ ಬಂದ ಸಂಪಾದನೆಯ ಒಂದು ಭಾಗವನ್ನು ಸಮಾಜದ ಹಿತಕ್ಕೆ ಬಳಸಬೇಕು. ದುರಾಸೆಯಿಂದ ಅನಂತ ಕಾಲ ಬದುಕಬಹುದು ಎಂಬುದು ಕನಸಿನ ಮಾತು. ಮನುಷ್ಯನ ದುರಾಸೆಗೆ ಪ್ರಕೃತಿಯೇ ಪಾಠ ಕಲಿಸಿರುವುದನ್ನು ಕಂಡಿದ್ದೇವೆ. ನಿಷ್ಠೆ, ಪ್ರಾಮಾಣಿಕತೆ,ಶ್ರದ್ಧೆ, ಪ್ರೀತಿ, ಸೇವೆಯ ಭಾವನೆಗಳು ಅರಳಿದರೆ ಬದುಕು ಸಾರ್ಥಕಗೊಳ್ಳುತ್ತದೆ.</p>.<p>- ಹಿರಿಶಾಂತವೀರ ಮಹಾಸ್ವಾಮಿಗಳು, ಗವಿಮಠ, ಹೂವಿನಹಡಗಲಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>